ಅರಂಬೂರಿನ ಪಾಲಡ್ಕದಲ್ಲಿ ಸ್ಕೂಟಿ ಸ್ಕಿಡ್ ಆಗಿ ಪಲ್ಟಿ

0

ಪೆರಾಜೆಯ ಯುವಕನಿಗೆ ಗಂಭೀರ ಗಾಯ – ಆಸ್ಪತ್ರೆಗೆ ದಾಖಲು

ಸ್ಕೂಟಿಯೊಂದು ಸ್ಕಿಡ್ ಆಗಿ ಪಲ್ಟಿಯಾದ ಪರಿಣಾಮವಾಗಿ ಸವಾರ, ಪೆರಾಜೆಯ ಯುವಕನೋರ್ವ ಮುಖಕ್ಕೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಅರಂಬೂರಿನ ಪಾಲಡ್ಕದಲ್ಲಿ ಅ.11ರಂದು ರಾತ್ರಿ ಸಂಭವಿಸಿದೆ.

ಪೆರಾಜೆ ಗ್ರಾಮದ ಕೊಳಂಗಾಯ ಶ್ರೀಮತಿ ವೇದಾವತಿ ಎಂಬವರ ಪುತ್ರ ಜೀವಿತ್ ರಾತ್ರಿ 10 ಗಂಟೆ ವೇಳೆಗೆ ಸುಳ್ಯಕ್ಕೆ ತಮ್ಮ ಸ್ಕೂಟಿಯಲ್ಲಿ ಬಂದು ಮರಳಿ ಮನೆಗೆ ಹೋಗುತ್ತಿದ್ದ ವೇಳೆ ಅರಂಬೂರಿನ ಪಾಲಡ್ಕದಲ್ಲಿ ಸ್ಕೂಟಿ ಸವಾರನ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಪಲ್ಟಿಯಾಯಿತೆನ್ನಲಾಗಿದೆ.


ಪರಿಣಾಮವಾಗಿ ಸವಾರ ಜೀವಿತ್ ಅವರು ಡಾಮಾರು ರಸ್ತೆಗೆ ಎಸೆಯಲ್ಪಟ್ಟು, ತುಟಿ, ದವಡೆ ಸೇರಿದಂತೆ ಮುಖಕ್ಕೆ ಗಂಭೀರವಾಗಿ ಗಾಯಗೊಂಡರೆನ್ನಲಾಗಿದೆ.

ವಿಷಯ ತಿಳಿದ ಪೆರಾಜೆಯ ಉದಯ ಕುಂಬಳಚೇರಿ, ಅಶೋಕ ಪೀಚೆ, ಪ್ರವೀಣ್ ಮಜಿಕೋಡಿ, ಪುರುಷೋತ್ತಮ ಕುಂಬಳಚೇರಿ ಮತ್ತಿತರ ಯುವಕರು ಸೇರಿ ಗಾಯಾಳು ಯುವಕನನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದರೆಂದು ತಿಳಿದುಬಂದಿದೆ. ಇದೀಗ ಜೀವಿತ್ ಅವರು ಕೆವಿಜಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದುಬಂದಿದೆ.