ಪಂಜ: ಜೇಸಿ ಸಪ್ತಾಹ ಉದ್ಘಾಟನೆ

0

⬆️ ಜೇಸಿ ಸಪ್ತಾಹವೆಂದರೆ ಹಬ್ಬ : JFM SEN ಅಭಿಷೇಕ್ ಜಿ ಎಮ್

⬆️ ದೇವಳಕ್ಕೆ ಕದಿರು ಗದ್ದೆ ನೀಡಿದ ಮಾದರಿ ಸಂಸ್ಥೆ: ಡಾ.ದೇವಿಪ್ರಸಾದ್ ಕಾನತ್ತೂರ್

⬆️ ಅ.19 ರ ತನಕ ನಿರಂತರ ಕಾರ್ಯಕ್ರಮ

ಜೇಸಿಐ ಪಂಜ ಪಂಚಶ್ರೀ ಇದರ ಜೇಸಿ ಸಪ್ತಾಹ -2024 ಅ.13 ರಿಂದ ಅ.19 ತನಕ ನಡೆಯಲಿದೆ. ಪ್ರತಿ ದಿನ ಘಟಕದ ಅಧ್ಯಕ್ಷ JFM ಜೀವನ್ ಮಲ್ಕಜೆ ಸಭಾಧ್ಯಕ್ಷತೆಯಲ್ಲಿ ವಿಜೃಂಭಣೆಯಿಂದ ನಡೆಯಲಿದೆ.

ಅ.13 ರಂದು ಮುಂಜಾನೆ ರಿಂದ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ವಠಾರದಲ್ಲಿ ಜೇಸಿ ಸಪ್ತಾಹ ಉದ್ಘಾಟನೆ ಮತ್ತು ಕೆಸರು ಗದ್ದೆ ಕ್ರೀಡಾಕೂಟ ಜರುಗಿತು.

ವಲಯ ಉಪಾಧ್ಯಕ್ಷ JFM SEN ಅಭಿಷೇಕ್ ಜಿ ಎಮ್ ಸಪ್ತಾಹ ಉದ್ಘಾಟಿಸಿ ಮಾತನಾಡಿ.
“ಜೇಸಿ ಸಂಸ್ಥೆ ವ್ಯಕ್ತಿತ್ವ ವಿಕಸನಕ್ಕಾಗಿ ಇರುವ ಸಂಸ್ಥೆ. ಈ ಮೂಲಕ ವಿಶೇಷ ಕೊಡುಗೆ ನೀಡಿದ ಸಂಸ್ಥೆ. ಪಂಜ ಜೇಸಿಐ ಪಂಚಶ್ರೀ ಸಾಮಾಜಿಕ ಕೊಡುಗೆಗಳನ್ನು ನೀಡುತ್ತಾ ಬೆಳೆದು ಬಂದ ಕ್ರಿಯಾ ಶೀಲ ಘಟಕ. ಜೇಸಿ ಸಪ್ತಾಹ ಎಂದರೆ ಜೇಸಿ ಹಬ್ಬ”.ಎಂದು ಅವರು ಶುಭ ಹಾರೈಸಿದರು.

ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ JFM
ಜೀವನ್ ಮಲ್ಕಜೆ ಸಭಾಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಪಂಜಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಮಾತನಾಡಿ
“ದೇವಳಕ್ಕೆ ಜೇಸಿ ಪಂಜ ಪಂಚಶ್ರೀ ವತಿಯಿಂದ ಕೊಡ ಮಾಡಿರುವ ಕದಿರು ಗದ್ದೆಯಿಂದ ಸುಮಾರು 10 ಸಾವಿರಕ್ಕೂ ಮಿಕ್ಕಿ ಮನೆಗಳಿಗೆ, ಪುತ್ತೂರು, ಸುಳ್ಯ,ಕಡಬ ತಾಲೂಕಿನ ಅನೇಕ ದೇವಸ್ಥಾನಗಳಿಗೆ, ದೈವಸ್ಥಾನಗಳಿಗೆ ಕದಿರು ನೀಡಲಾಗಿದ್ದು , ಅವರು ಕದಿರು ತುಂಬಿಸುವ ಕಾರ್ಯಕ್ರಮ ಮಾಡಿದ್ದಾರೆ. ನವಾನ್ನ ಭೋಜನಕ್ಕೂ ಇಲ್ಲಿಂದ ಭತ್ತ ಕೊಂಡೋಗಿದ್ದಾರೆ. ದೇವಳಕ್ಕೆ ಗದ್ದೆ ಹಸ್ತಾಂತರ ಆದ ಬಳಿಕವೂ ಪ್ರತಿ ವರುಷ ನೇಜಿ ನೆಡುವುದು, ಆರೈಕೆ, ಕೊಯ್ಲು ಕೆಲಸದಲ್ಲೂ ಅತ್ಯಂತ ಅಚ್ಚುಕಟ್ಟಾಗಿ ಸಂಪೂರ್ಣ ತೊಡಗಿಸಿರುವ ಜೇಸಿಐ ಪಂಜ ಪಂಚಶ್ರೀ ಮಾದರಿ ಸಂಘಟನೆಯಾಗಿದೆ.” ಎಂದು ಅವರು ಶುಭ ಹಾರೈಸಿದರು.

ಘಟಕದ ಸ್ಥಾಪಕಾಧ್ಯಕ್ಷ ದೇವಿಪ್ರಸಾದ್ ಜಾಕೆ, ನಿಕಟಪೂರ್ವಾಧ್ಯಕ್ಷ ಲೋಕೇಶ್ ಆಕ್ರಿಕಟ್ಟೆ, ಕಾರ್ಯದರ್ಶಿ ಜೀವನ್ ಶೆಟ್ಟಿಗದ್ದೆ , ಸಪ್ತಾಹ ನಿರ್ದೇಶಕ ವಾಚಣ್ಣ ಕೆರೆಮೂಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜಯರಾಮ ಕಲ್ಲಾಜೆ ವೇದಿಕೆಗೆ ಆಹ್ವಾನಿಸಿದರು.ಪವನ್ ಮೂಲೆಮನೆ ಜೇಸಿ ವಾಣಿ ನುಡಿದರು. ಜೀವನ್ ಮಲ್ಕಜೆ ಸ್ವಾಗತಿಸಿದರು.ದೇವಿಪ್ರಸಾದ್ ಜಾಕೆ ಪ್ರಾಸ್ತಾವಿಕ ಮಾತನಾಡಿದರು.ವಿಜೇಶ್ ಹಿರಿಯಡ್ಕ ಅತಿಥಿಯನ್ನು ಪರಿಚಯಿಸಿದರು. ಜೀವನ್ ಶೆಟ್ಟಿಗದ್ದೆ ವಂದಿಸಿದರು.ಬಳಿಕ ಕೆಸರು ಗದ್ದೆ ಕ್ರೀಡಾಕೂಟ, ಏರ್ ಗನ್ ಶೂಟಿಂಗ್ ಸ್ಪರ್ಧೆ ನಡೆಯಿತು.

ಅ.14 ರಂದು ಬೆಳಿಗ್ಗೆ ಗಂಟೆ 9.30 ರಿಂದ ಪರಿಣಾಮಕಾರಿ ಭಾಷಣ ಕಲೆ ತರಬೇತಿ ಕಾರ್ಯಗಾರ ಸುಬ್ರಮಣ್ಯ ಕೆ ಎಸ್ ಎಸ್ ಕಾಲೇಜು ನಲ್ಲಿ ಜರುಗಲಿದೆ.

ಅ.15 ರಂದು ಬೆಳಿಗ್ಗೆ ಗಂಟೆ 10 ರಿಂದ ಸುರೇಶ್ ಬಲ್ನಾಡ್ ರವರ ತೋಟದಲ್ಲಿ ಕೃಷಿ ಕ್ಷೇತ್ರ ಭೇಟಿ ಕಾರ್ಯಕ್ರಮ.

ಅ.16. ರಂದು ಸಂಜೆ ಗಂಟೆ 7 ರಿಂದ ಗುತ್ತಿಗಾರು ದೇವಿ ಸಿಟಿ ಕಾಂಪ್ಲೆಕ್ಸ್ ಸಭಾ ಭವನದಲ್ಲಿ ಸಾಧಕರಿಗೆ ಸನ್ಮಾನ ಮತ್ತು ನಗುವಿನ ಹಬ್ಬ ನಡೆಯಲಿದೆ . ಮುಖ್ಯ ಅತಿಥಿಯಾಗಿ ಸುಳ್ಯ ಟಿ ಎ ಪಿ ಸಿ ಎಂ ಎಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯರಾಮ್ ದೇರಪ್ಪಜ್ಜನ ಮನೆ, ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ ಪಾಲ್ಗೊಳ್ಳಲಿದ್ದಾರೆ. ನಾಟಿ ವೈದ್ಯ ಶ್ರೀಮತಿ ಪುಷ್ಪಾ ದೇವಿದಾಸ್ ಬುಡ್ಲೆಗುತ್ತು, ಭಾರತೀಯ ಸೇನೆಯೊಂದಿಗೆ ಬೈಕ್ ರ್‍ಯಾಲಿಯಲ್ಲಿ ಪಾಲ್ಗೊಂಡ 2000 ಕಿ.ಮಿ ಕ್ರಮಿಸಿದ ಸಾಹಸಿ ವೃಷ್ಠಿ ಮಲ್ಕಜೆ, ವಿಶ್ವ ದಾಖಲೆ ನಿರ್ಮಿಸಿದ ಯೋಗ ಪಟು ವಿಹಾನಿ ವಾಲ್ತಾಜೆ, ಮಂಗಳೂರು ವಿಶ್ವವಿದ್ಯಾನಿಲಯದ ರ್‍ಯಾಂಕ್ ವಿಜೇತೆ ಶ್ರಾವ್ಯ ಮುತ್ಲಾಜೆ ರವರನ್ನು ಜೇಸಿ ವಲಯ ಅಧ್ಯಕ್ಷ ಗಿರೀಶ್ ಎಸ್ ಪಿ ಸನ್ಮಾನಿಸಲಿದ್ದಾರೆ. ಆದರ್ಶ ಯೂತ್ ಕ್ಲಬ್ ಅಧ್ಯಕ್ಷ ಆಕರ್ಷ್ ಕುಳ್ಳಂಪಾಡಿ ಉಪಸ್ಥಿತರಿರುವರು. ನಗುವಿನ ಹಬ್ಬ ದಲ್ಲಿ ಕುಡ್ಲ ಕುಸಲ್ ತಂಡದಿಂದ ರವಿ ರಾಮಕುಂಜ ಅಭಿನಯದ ತೆಲಿಕೆದ ಕಮ್ಮೆನ ಪ್ರದರ್ಶನ ಗೊಳ್ಳಲಿದೆ.

ಅ.17 ರಂದು ಬೆಳಿಗ್ಗೆ ಗಂಟೆ 9 ರಿಂದ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನದಲ್ಲಿ ಮುಕ್ತ ಚಿತ್ರಕಲಾ ಮತ್ತು ಕೇರಂ ಸ್ಪರ್ಧೆ ಜರುಗಲಿದೆ. ಚಿತ್ರಕಲಾ ಸ್ಪರ್ಧೆ ಎಲ್‌ ಕೆ ಜಿಯಿಂದ 1 ನೇ ತರಗತಿ, 2ರಿಂದ 4ನೇ ತರಗತಿ, 5 ರಿಂದ 7 ನೇ ತರಗತಿ,8 ರಿಂದ 10 ನೇ ತರಗತಿ ಮತ್ತು ಸಾರ್ವಜನಿಕ ವಿಭಾಗದಲ್ಲಿ ಜರುಗಲಿದೆ.

ಅ.18 ರಂದು ಸಂಜೆ ಗಂಟೆ 6.30 ರಿಂದ ಪಂಜ ಲಯನ್ಸ್ ಭವನದಲ್ಲಿ ಕೌಟುಂಬಿಕ ತರಬೇತಿ ಕಾರ್ಯಗಾರ ನಡೆಯಲಿದೆ.

ಅ.19 ರಂದು ಸಂಜೆ ಗಂಟೆ 7 ರಿಂದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಬೆಳ್ಳಾರೆ ಜ್ಞಾನ ಗಂಗಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ ಪಿ ಉಮೇಶ್ ಪಾಲ್ಗೊಳ್ಳಲಿದ್ದಾರೆ. ಜೇಸಿಐ ಪಂಜ ಪಂಚಶ್ರೀ ಪೂರ್ವಾಧ್ಯಕ್ಷ ವಾಸುದೇವ ಮೇಲ್ಪಾಡಿ ರವರಿಗೆ ಕಮಲ ಪತ್ರ ಪುರಸ್ಕಾರ ನಡೆಯಲಿದೆ. ಜೇಸಿಐ ಪೂರ್ವ ವಲಯಾಧ್ಯಕ್ಷ ಪುರಂದರ ರೈ ಪರಸ್ಕರಿಸುವವರು. ಅಂತರಾಷ್ಟ್ರೀಯ ಈಜು ಪಟು ದಿಗಂತ್ ವಿ ಎಸ್, ಮೈಸೂರು ವಿಶ್ವವಿದ್ಯಾನಿಲಯದ ರ್‍ಯಾಂಕ್ ವಿಜೇತೆ ಪ್ರಜ್ಞಾ ಎ ಡಿಸೋಜ, ಉದಯೋನ್ಮುಖ ಯಕ್ಷಗಾನ ಭಾಗವತ ರಚನಾ ಚಿದ್ಗಲ್ ರವರು ಸನ್ಮಾನ ಸ್ವೀಕರಿಸಲಿದ್ದಾರೆ. ಪಂಚಶ್ರೀ ವಿದ್ಯಾನಿಧಿ ಸಮರ್ಪಣೆ ನಡೆಯಲಿದೆ . ಸಾಂಸ್ಕೃತಿಕ ಸಂಭ್ರಮದಲ್ಲಿ ಡ್ಯಾನ್ಸ್ ಮತ್ತು ಬೀಟ್ಸ್ ಮತ್ತು ಸಂಸ್ಥೆ ವಿದ್ಯಾರ್ಥಿಗಳಿಂದ ನೃತ್ಯ ಸಂಭ್ರಮ, ಲಕುಮಿ ತಂಡದ ಕುಸಾಲ್ದ ಕಲಾವಿದರ್ ಅಭಿನಯಿಸುವ ಅರವಿಂದ್ ಬೋಳಾರ್ ವಿಭಿನ್ನ ಪಾತ್ರದ ತುಳು ಹಾಸ್ಯಮಯ ನಾಟಕ ಒರಿಯಾಂಡಲಾ ಸರಿಬೋಡು ಪ್ರದರ್ಶನಗೊಳ್ಳಲಿದೆ.