ಮಂಡೆಕೋಲು ಗ್ರಾಮದ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಸದಾನಂದ ಮಾವಜಿ ಆಯ್ಕೆಯಾಗಿದ್ದಾರೆ.



ಫೆ.21ರಂದು ನಡೆದ ಸಮಿತಿ ಸಭೆಯಲ್ಲಿ ಈ ಆಯ್ಕೆಮಾಡಲಾಯಿತು.
ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ
ನಿವೃತ್ತ ಮುಖ್ಯ ಶಿಕ್ಷಕ ಶಿವರಾಮ ಗೌಡ ಪೇರಾಲು, ಕೃಷಿಕ ಶುಭಕರ ಬೊಳುಗಲ್ಲು, ಉದ್ಯಮಿ ವಿಕಾಸ್ ಮೀನಗದ್ದೆ, ಸತೀಶ್ ಕಣೆಮರಡ್ಕ, ವೇದಾವತಿ ಕೇನಾಜೆ, ವಿದ್ಯಾಶ್ರೀ ಹರ್ಷಿತ್ ಮೈತಡ್ಕ ಪೇರಾಲು, ಸುಂದರ ನಾಯ್ಕ ಮೈಲೆಟ್ಟಿಪಾರೆ, ಹಾಗೂ ದೇವಸ್ಥಾನದ ಪ್ರಧಾನ ಅರ್ಚಕರಾದ ಶಿವಪ್ರಸಾದ್, ನಿಕಟಪೂರ್ವ ಸಮಿತಿ ಅಧ್ಯಕ್ಷ ಕೇಶವಮೂರ್ತಿ ಹೆಬ್ಬಾರ್, ಕಳೇರಿ ಸಮಿತಿ ಅಧ್ಯಕ್ಷ ಪೂರ್ಣಚಂದ್ರ ಕಣೆಮರಡ್ಕ ಮೊದಲಾದವರಿದ್ದರು.