ಸಂಘ ಸಂಸ್ಥೆಗಳು ಮತ್ತು ಕೊಡುಗೈ ದಾನಿಗಳ ನೆರವಿನಿಂದ ಮನೆ ನಿರ್ಮಾಣವಾಗುತ್ತಿರುವ ಅಮರಪಡ್ನೂರು ಗ್ರಾಮದ ಹೊನ್ನೆಕಡ್ಪು ಶ್ರೀಮತಿ ಸೀತಮ್ಮರ ಕುಟುಂಬಕ್ಕೆ ಕಜೆಮೂಲೆಯ ಕೆ. ವೆಂಕಟ್ರಮಣ ಗೌಡರು 30 ಕೆ.ಜಿ ಅಕ್ಕಿಯನ್ನು ಕೊಡುಗೆಯಾಗಿ ನೀಡಿದರು.
ಶ್ರೀಮತಿ ಸೀತಮ್ಮ ಮತ್ತು ಪುತ್ರಿಯರಾದ ಕು. ಚಿತ್ರಾಕ್ಷಿ, ಕು. ಹರಿಣಿ, ಸುದ್ದಿ ಪತ್ರಿಕೆಯ ವರದಿಗಾರ ಈಶ್ವರ ವಾರಣಾಶಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


