ಸಾವಿರಾರು ಮಂದಿ ಭಕ್ತಾಾದಿಗಳ ಸಮ್ಮುಖದಲ್ಲಿ ನಡೆದ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿಪ್ರವೇಶ

ದ.ಕ. ಸಂಪಾಜೆ ಗ್ರಾಮದ ಇತಿಹಾಸ ಪ್ರಸಿದ್ದ ಕಲ್ಲುಗುಂಡಿ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲವು ಮಾ.28 ಮತ್ತು 29ರಂದು ಜರುಗಿತು.

ಮಾ.27ರಂದು ಬೆಳಿಗ್ಗೆ ದೈವಸ್ಥಾನದ ಸನ್ನಿಧಿಯಲ್ಲಿ ಗಣಹೋಮ ನಡೆಯಿತು. ಮಾ.28ರಂದು ರಾತ್ರಿ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಿಂದ ಭಂಡಾರವನ್ನು ಒತ್ತೆಕೋಲ ಗದ್ದೆಗೆ ತಂದು, ಬಳಿಕ ಮೇಲೇರಿಗೆ ಅಗ್ನಿಸ್ಪರ್ಶ ಮಾಡಲಾಯಿತು .ರಾತ್ರಿ ಶ್ರೀ ವಿಷ್ಣುಮೂರ್ತಿ ದೈವದ ಕುಳ್ಳಾಟ ನಡೆಯಿತು. ಅಪ್ಪು ಮೇಲೋಡಿಸ್ ಕುದ್ರೆ ಪಾಯ ತಂಡದಿಂದ ನಾಸಿಕ್ ಬ್ಯಾಂಡ್ ಸೆಟ್ ಪ್ರದರ್ಶನ ನಡೆಯಿತು.

ಮಾ.29ರಂದು ಬೆಳಿಗ್ಗೆ ಶ್ರೀ ಮಹಾವಿಷ್ಣುಮೂರ್ತಿ ದೈವದ ಅಗ್ನಿಪ್ರವೇಶ, ಮಾರಿಕಳ ಪ್ರವೇಶ, ಬಳಿಕ ಪ್ರಸಾದ ವಿತರಣೆ, ನಡೆಯಿತು.
ಈ ಸಂದರ್ಭದಲ್ಲಿ ಅದೀಪ ಕೃಷ್ಣ, ಮಹಾವಿಷ್ಣು ದೈವಸ್ಥಾನದ ಅಧ್ಯಕ್ಷ ಕೆ.ಆರ್. ಜಗದೀಶ್ ರೈ, , ಮೊಕ್ತೇಸರ ಕೆ. ಕರುಣಾಕರ ಕೆ.ಎಸ್, ಕಾರ್ಯದರ್ಶಿ ಕೆ.ವಿ. ಮಂಜುನಾಥ್, ಕೋಶಾಧಿಕಾರಿ ಬಿ.ಆರ್. ಪದ್ಮಯ್ಯ, ಗೌರವ ಸಲಹೆಗಾರರು ಶ್ರೀಧರ ಮಾದೆಪಾಲು, ಉದಯ ಶಂಕರ ಕುಕ್ಕೇಟಿ, ಜಯಾನಂದ ಸಂಪಾಜೆ, ತೀಯ ಸಮಾಜ ಅಧ್ಯಕ್ಷ ಶ್ರೀಧರ ಕೆ.ಕೆ, ವಿ.ವಿ ಬಾಲನ್ , ದೈವಸ್ಥಾನದ ಪ್ರಧಾನ ಪೂಜಾರಿ ನಾರಾಯಣ ಬಾಲೆಂಬಿ, ಉಪ ಪೂಜಾರಿ , ಕುಂಞಿ ರಾಮನ್ ಕೀಲಾರು, ಕಚೇರಿ ನಿರ್ವಾಹಕ ಬಿ. ಶಿವರಾಮ, ಹಾಗೂ ಆಡಳಿತ ಸಮಿತಿಯ ಪದಾಧಿಕಾರಿಗಳು ಹಾಗೂ ತೀಯ ಸಮಾಜ ಬಾಂಧವರು ಹಾಗೂ ಊರ- ಪರವೂನಿoದ ಸಾವಿರಾರು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.



ಮಾ.30ರಂದು ನಾಳೆ ಮಧ್ಯಾಹ್ನ ಪಂಜುರ್ಲಿ ಹಾಗೂ ಕಲ್ಲುರ್ಟಿ ಮತ್ತು ಗುಳಿಗ ದೈವಗಳಿಗೆ ಸಮ್ಮಾನ ನಡೆಯಲಿದೆ.