ಶಿವರಾಜನ್ ನಾಯರ್‌ರವರಿಗೆ ಕೆಎನ್‌ಎಸ್‌ಎಸ್ ಶ್ರದ್ದಾಂಜಲಿ

0

ಇತ್ತೀಚೆಗೆ ಅಗಲಿದ ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ ಸುಳ್ಯ ಕರಯೋಗಂ ಕಾರ್ಯಕಾರಿ ಸಮಿತಿ ಸದಸ್ಯ ಶಿವರಾಜನ್ ನಾಯರ್ ಅವರ ವೈಕುಂಠ ಸಮಾರಾಧನೆ ಮತ್ತು ಕೆಎನ್‌ಎಸ್‌ಎಸ್ ವತಿಯಿಂದ ಶ್ರದ್ದಾಂಜಲಿ ಸಭೆಯು ಸುಳ್ಯದ ಕನ್ನಡ ಭವನದಲ್ಲಿ ನಡೆಯಿತು.

ಕೆಎನ್‌ಎಸ್‌ಎಸ್ ಸುಳ್ಯ ಕರಯೋಗಂ ಅಧ್ಯಕ್ಷ ಭಾಸ್ಕರನ್ ನಾಯರ್ ಮಧುವನ, ಮಾಜಿ ಅಧ್ಯಕ್ಷ ಪದ್ಮನಾಭನ್ ನಾಯರ್ ಮೊದಲಾದವರು ಮಾತನಾಡಿದರು. ಕಾರ್ಯದರ್ಶಿ ಬಾಲಕೃಷ್ಣನ್ ನಾಯರ್ ಎಸ್.ಬಿ., ಕೋಶಾಧಿಕಾರಿ ಪ್ರಭಾಕರನ್ ನಾಯರ್ ಸ್ವಾಗತ್, ದಿ. ಶಿವರಾಜನ್ ಅವರ ಪತ್ನಿ ಲತಾ, ಪುತ್ರಿ ಜಿನಿತಾ, ಅಳಿಯ ಕೃಷ್ಣನ್ ಮೊದಲಾದವರು ಉಪಸ್ಥಿತರಿದ್ದರು.