ಸುಳ್ಯ: ಹಾಸನಡ್ಕ ಆರೋಗ್ಯ ಧಾಮ ಸ್ಥಳಾಂತರಗೊಂಡು ಶುಭಾರಂಭ

0

ಸುಳ್ಯದ ಕೆ.ಆರ್. ಕಾಂಪ್ಲೆಕ್ಸ್ ನಲ್ಲಿದ್ದ ಡಾ. ಶಶಿಧರ ಹಾಸನಡ್ಕರವರ ಹಾಸನಡ್ಕ ಆರೋಗ್ಯ ಧಾಮ ಫೆ. 5ರಂದು ಶ್ರೀರಾಂ ಪೇಟೆಯ ಸಾಯಿರಾಂ ಕಾಂಪ್ಲೆಕ್ಸ್ ಗೆ ಸ್ಥಳಾಂತರಗೊಂಡು ಶುಭಾರಂಭಗೊಂಡಿತು. ಕಾಂಪ್ಲೆಕ್ಸ್ ನ ಮಾಲಕರಾದ ಸತ್ಯಪ್ರಸಾದ್ ಕುರುಂಜಿ, ಡಾ. ಸವಿತಾ ಸತ್ಯಪ್ರಸಾದ್ ದೀಪ ಬೆಳಗಿಸಿ ಸಂಸ್ಥೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಹಿರಿಯರಾದ ಶ್ರೀಮತಿ ಪಾರ್ವತಿ ವಸಂತಕುಮಾರ್ ಕೋಟೆ, ಗಣಪಯ್ಯ ವನಶ್ರೀ ಪೆರುವಾಜೆ, ಶ್ರೀಮತಿ ಶಶಿಕಲಾ ಗಣಪಯ್ಯ, ಶ್ರೀಧರ ಭಟ್, ಗಾಯತ್ರಿ ಭಟ್, ಸಂದೇಶ್ ಕರುಂಜಿ, ಆದರ್ಶ ಬಿ.ಎಮ್, ಸುಬ್ರಹ್ಮಣ್ಯ ಶಾಸ್ತ್ರಿ , ಡಾ. ಅನಂತ್, ಚಿನ್ಮಯ ಹಾಸನಡ್ಕ ಉಪಸ್ಥಿತರಿದ್ದರು. ಡಾ. ಶಶಿಧರ್ ಹಾಸನಡ್ಕ ಮತ್ತು ಡಾ. ಅನುಪಮಾ ಹಾಸನಡ್ಕ ಅತಿಥಿಗಳನ್ನು ಸ್ವಾಗತಿಸಿದರು.