ಮಕ್ಕಳ ದಿನಾಚರಣೆಯ ಪ್ರಯುಕ್ತ ಗಾಂಧಿನಗರ ಅಂಗನವಾಡಿಯ ನೂತನ ಕೊಠಡಿ ಉದ್ಘಾಟನೆ

0

ಹೆಚ್ಚುವರಿಯಾಗಿ ಸುಮಾರು ಐವತ್ತು ಸಾವಿರ ರೂ. ಸ್ವಂತ ಹಣ ವ್ಯಯಿಸಿ, ಕೊಠಡಿ ನಿರ್ಮಾಣ ಮಾಡಿರುವ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ

ಮಕ್ಕಳ ದಿನಾಚರಣೆ ಪ್ರಯುಕ್ತ ಸುಳ್ಯದ ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ ನೂತನ ಕೊಠಡಿ ಉದ್ಘಾಟನೆ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮ ನ.22 ರಂದು ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿ.ಡಿ.ಪಿ.ಒ. ಶ್ರೀಮತಿ ಶೈಲಜ ವಹಿಸಿದ್ದರು.


ಸುಮಾರು ಒಂದು ಲಕ್ಷದ ಐವತ್ತು ಸಾವಿರ ವೆಚ್ಚದಲ್ಲಿ ನಿರ್ಮಾಣವಾದ ನೂತನ ಕೊಠಡಿಯನ್ನು ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ಉದ್ಘಾಟಿಸಿದರು. ಶುಭ ಹಾರೈಸಿದರು.
” ನೂತನ ಕೊಠಡಿಗೆ ಇಲಾಖೆ ವತಿಯಿಂದ ಒಂದು ಲಕ್ಷ ರೂ. ಅನುದಾನ ಬಂದಿದ್ದು, ಎಸ್ಟಿಮೇಟ್ ಗಿಂತ ಅಧಿಕ ವಿಸ್ತೀರ್ಣ ನಿರ್ಮಾಣ ಮಾಡಿರುತ್ತೇನೆ. ಈ ನೂತನ ಕೊಠಡಿಗೆ ಹೆಚ್ಚುವರಿಯಾಗಿ ಸುಮಾರು ಐವತ್ತು ಸಾವಿರದಷ್ಟು ಅಧಿಕ ಖರ್ಚು ಆಗಿದ್ದು ನಾನು ಸ್ವತಃ ನನ್ನ ಕೈಯಿಂದ ಹಾಕಿ ಪೂರ್ತಿಗೊಳಿಸಿರುತ್ತೇನೆ” ಎಂದು ಶರೀಫ್ ಕಂಠಿ ಹೇಳಿದರು.
ನೂತನ ಸಿ.ಡಿ.ಪಿ.ಒ. ಶ್ರೀಮತಿ ಶೈಲಜ ರವರನ್ನು ನ.ಪಂ. ಸದಸ್ಯ ಶರೀಫ್ ಕಂಠಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ನಗರ ಪಂಚಾಯತ್ ಸದಸ್ಯ ರಿಯಾಜ್ ಕಟ್ಟೆಕಾರ್, ಮಾಜಿ ಸದಸ್ಯ ಕೆ.ಎಂ.ಮುಸ್ತಾಫ , ಶುಭಶ್ರೀ ಮಹಿಳಾ ಮಂಡಲ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಅಂಗನವಾಡಿ ಅಧ್ಯಾಪಕರು, ಪುಟಾಣಿ ಮಕ್ಕಳು ಹಾಗೂ ಪೋಷಕರು ಹಾಜರಿದ್ದರು.