ಕಳಂಜ ಮಳೆಯ ಆರ್ಭಟ, ಕೆದಿಲ ರಸ್ತೆ ಬಂದ್, ಬೀಡು ಸಂಜೀವ ಮಣಿಯಾಣಿಯವರ ತೋಟ ಜಲಾವೃತ

0

ಅ. 6ರಂದು ಸಂಜೆ ಸುರಿದ ಭೀಕರ ಮಳೆಗೆ ಬೆಳ್ಳಾರೆ ಸೇರಿದಂತೆ ಹಲವು ಕಡೆಗಳಲ್ಲಿ ಹಾನಿಯುಂಟಾಗಿದೆ.


ಬೆಳ್ಳಾರೆಯ ಬೀಡು ಸಂಜೀವ ಮಣಿಯಾಣಿಯವರ ತೋಟ ಸಂಪೂರ್ಣ ಜಲಾವೃತವಾಗಿರುವುದಲ್ಲದೆ, ಅಡಿಕೆ, ತೆಂಗು ನೀರಿನಲ್ಲಿ ಕೊಚ್ಚಿ ಹೋಗಿದೆ.

ಮನೆಯ ಸುತ್ತ, ಅಂಗಳದಲ್ಲಿ ನೀರು ತುಂಬಿಕೊಂಡಿದೆ. ಕಳಂಜ ಗ್ರಾಮದ ಕೋಟೆ ಎಂಬಲ್ಲಿ ಕೆದಿಲ, ವಾರಣಾಶಿ ಸಂಪರ್ಕಿಸು ರಸ್ತೆಗೆ ಬರೆ ಜರಿದು ಬಿದ್ದಿದ್ದು ರಸ್ತೆ ಸಂಪರ್ಕ ಕಡಿತವಾಗಿದೆ. ಇದರೊಂದಿಗೆ ವಿದ್ಯುತ್ ಕಂಬವೂ ರಸ್ತೆಗೆ ಉರುಳಿ ಬಿದ್ದಿರುವುದಾಗಿ ತಿಳಿದುಬಂದಿದೆ.