ಕಲ್ಕುಡ ದೈವಸ್ಥಾನದಲ್ಲಿ ಅಷ್ಟ ಮಂಗಲ ಪ್ರಶ್ನಾ ಚಿಂತನೆ

0

ಸುಳ್ಯದ ಗಾಂಧಿನಗರ ನಾವೂರಿನ ಶ್ರೀ ಕಲ್ಕುಡ ಕಲ್ಲುರ್ಟಿ ಗುಳಿಗ ದೈವಗಳ ದೈವಸ್ಥಾನದಲ್ಲಿ ಅಷ್ಟ ಮಂಗಲ ಪ್ರಶ್ನಾ ಚಿಂತನೆಯು ನಡೆಯಿತು.

ದೈವಸ್ಥಾನದ ಜೀರ್ಣೋದ್ಧಾರ ಹಾಗೂ ಸಾನಿಧ್ಯದ ಅಭಿವೃದ್ಧಿ ಪರ ಚಿಂತನೆಯನ್ನು ಹಿರಿಯ
ದೈವಜ್ಞರಾದ ಪುತ್ತೂರು ಕಬಕದ ವಿಶ್ವನಾಥ ಜೋಯಿಸರ ಮಾರ್ಗದರ್ಶನದಲ್ಲಿ ಹಾಗೂ ಮುಳ್ಳೇರಿಯದ ಮಹಾಲಿಂಗೇಶ್ವರ ಶರ್ಮ ರವರ ನೇತೃತ್ವದಲ್ಲಿ ನಡೆಸಲಾಯಿತು.
ದೈವಸ್ಥಾನದ
ಆಡಳಿತ ಧರ್ಮದರ್ಶಿ ಪಿ.ಕೆ.ಉಮೇಶ್, ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಮೊಕ್ತೇಸರರ ಪೈಕಿ ಕೃಪಾಶಂಕರ ತುದಿಯಡ್ಕ, ಧರ್ಮದರ್ಶಿ ಮಂಡಳಿಯ ಸದಸ್ಯರಾದ ಸೋಮನಾಥ ಪೂಜಾರಿ, ಕೇಶವ ನಾಯಕ್, ಚಂದ್ರಶೇಖರ ಸೆಂಚುರಿ, ಪ್ರಕಾಶ್ ಹೆಗ್ಡೆ, ದೈವಸ್ಥಾನದ ಪೂಜಾರಿ ಮೋನಪ್ಪ ಗೌಡ ‌ಕೆರೆಮೂಲೆ,ತಿಮ್ಮಪ್ಪ ಗೌಡ ನಾವೂರು ಹಾಗೂ ಸ್ಥಳೀಯ ಭಕ್ತಾದಿಗಳು ಉಪಸ್ಥಿತರಿದ್ದರು.