ಆಲೆಟ್ಟಿ ಸದಾಶಿವ ದೇವಳದಲ್ಲಿ ದಸರಾ ಪ್ರಯುಕ್ತ ಪಿಲಿರಂಗ್ ಊದು ಪೂಜೆಯ ಸಮಾರಂಭ

0

ಆಲೆಟ್ಟಿ ಗುಂಡ್ಯ ಜನನಿ ಫ್ರೆಂಡ್ಸ್ ಕ್ಲಬ್ ,ಜೆ.ಎಫ್.ಸಿ ಟೈಗರ್ಸ್ ಆಶ್ರಯದಲ್ಲಿ ಸುಳ್ಯ ದಸರಾ ಹಬ್ಬದ ಪ್ರಯುಕ್ತ ಹಮ್ಮಿಕೊಂಡ 3 ನೇ ವರ್ಷದ ಕಲಾ ಕಾಣಿಕೆಯಾಗಿ ಹುಲಿ ಕುಣಿತದ ಪಿಲಿರಂಗ್ ಊದು ಪೂಜೆಯ ಪ್ರಯುಕ್ತ ನಡೆದ ಉದ್ಘಾಟನಾ ಸಮಾರಂಭವು ಅ.16 ರಂದು ಆಲೆಟ್ಟಿ ಸದಾಶಿವ ದೇವಸ್ಥಾನದ ವಠಾರದಲ್ಲಿ‌ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಜೆ.ಎಫ್.ಸಿ.ಟೈಗರ್ಸ್ ಅಧ್ಯಕ್ಷ ಅಭಿಲಾಷ್ ಕೊಲ್ಲರಮೂಲೆ ವಹಿಸಿದ್ದರು.


ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ದೀಪ ಪ್ರಜ್ವಲಿಸಿದರು.


ಮುಖ್ಯ ಅಭ್ಯಾಗತರಾಗಿ ಚಲನ ಚಿತ್ರ ನಟ ಅರ್ಜುನ್ ಕಾಪಿಕಾಡ್, ಮಂಗಳೂರಿನ ಗಣೇಶ್ ಶಿಪ್ಪಿಂಗ್ ಎಜೆನ್ಸಿ ಪಾಲುದಾರ ಗಣೇಶ್ ಶೆಟ್ಟಿ, ಪುತ್ತೂರು ವಿಜಯ ಸಾಮ್ರಾಟ್ ಸ್ಥಾಪಕಾಧ್ಯಕ್ಷ ಸಹಜ್ ರೈ ಬಳ್ಳಜ್ಜ, ಪುತ್ತೂರು ಸೆವೆನ್ ಡೈಮೆಂಡ್ ಆರ್ಟ್ಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಶರತ್ ಆಳ್ವ ಕೂರೇಲು,ಉಡುಪಿ ಅಶೊಕ ರಾಜ್ ಬಳಗದ ಶ್ರೀಮತಿ ಸುಷ್ಮಾ ರಾಜ್,ಹಿಂದೂ ಮುಖಂಡ ಪುನೀತ್ ಅತ್ತಾವರ,
ಮಂಗಳೂರಿನ ಉದ್ಯಮಿ ಕಿರಣ ಅಟ್ಲೂರು, ಜನನಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಸತೀಶ್ ಕುಲಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕು.ಕೀರ್ತನಾ ಪ್ರಾರ್ಥಿಸಿದರು. ಜೆ.ಎಫ್.ಸಿ.ಟೈಗರ್ಸ್ ಕಾರ್ಯದರ್ಶಿ ಲತೀಶ್ ಗುಂಡ್ಯ ಸ್ವಾಗತಿಸಿದರು. ಇಂಜಿನಿಯರ್ ಪ್ರಣೀತ್ ಕಣಕ್ಕೂರು ವಂದಿಸಿದರು.


ಮೋಕ್ಷಿತ್ ಮಂಗಳೂರು ಕಾರ್ಯಕ್ರಮ ನಿರೂಪಿಸಿದರು.


ಆರಂಭದಲ್ಲಿ ಶಿವಪ್ರಸಾದ್ ಆಲೆಟ್ಟಿ ನೇತೃತ್ವದಲ್ಲಿ ಶಿವಸ್ವರ ಮೆಲೋಡಿಸ್ ತಂಡದವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.


ಸಭೆಯ ಬಳಿಕ ಊದು ಪೂಜೆಯು ಭಕ್ತಿ ಶ್ರದ್ಧೆಯಿಂದ ನಡೆಯಿತು.