ಪಡ್ಪಿನಂಗಡಿ ಶಾಲೆಯಲ್ಲಿ ಸ್ವಾತಂತ್ರ್ಯ ದ ಅಮೃತ ಮಹೋತ್ಸವ ಆಚರಣೆ

0

 

ಪಡ್ಪಿನಂಗಡಿ ಸ.ಹಿ.ಪ್ರಾ.ಶಾಲೆಯಲ್ಲಿ ಸ್ವಾತಂತ್ರ್ಯ ದ ಅಮೃತ ಮಹೋತ್ಸವದ ಆಚರಣೆ ಆ.15 ರಂದು ಜರುಗಿತು.ಎಸ್ ಡಿ ಎಂ ಸಿ ಅಧ್ಯಕ್ಷ ಮೇದಪ್ಪ ಗೌಡ ಅಲೆಂಗಾರ ಧ್ವಜಾರೋಹಣ ನೆರವೇರಿಸಿದರು.

 

ಬಳಿಕ ಸಭಾ ಕಾರ್ಯಕ್ರಮದಲ್ಲಿ ಅವರು ಸಭಾಧ್ಯಕ್ಷತೆ ವಹಿಸಿದ್ದರು.ಆತಿಥಿಗಳಾಗಿ ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷೆ ಹಾಜಿರಾ ಗಫೂರ್,
ಉಪಾಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ, ಸದಸ್ಯರಾದ ಲೋಕಯ್ಯ,ಬೊಳಿಯುರು,ಪವಿತ್ರ ಕುದ್ವ, ವಿಜಯಲಕ್ಷ್ಮಿ
ಜಯಲತಾ ಕೆ. ಡಿ, , ಶಾಲೆಯ ದತ್ತಿ ನಿಧಿ ಸ್ಥಾಪಕರಾದ ಗ್ರಾಮ ಪಂಚಾಯತ್ ಸದಸ್ಯ ಲೋಕೇಶ್ ಆಕ್ರಿಕಟ್ಟೆ,ಸುರೇಶ್ ಕುಮಾರ್ ನಡ್ಕ, ನಿವೃತ್ತ ಶಿಕ್ಷಕ ವಾಸುದೇವ ನಡ್ಕ , ಶಿಕ್ಷಕಿ ಧರ್ಮಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಧರ್ಮಾವತಿ ಸ್ವಾಗತಿಸಿದರು. ಶಿಕ್ಷಕಿ ಸುಗಂಧಿ ಪುತ್ಯ ನಿರೂಪಿಸಿದರು. ಶಿಕ್ಷಕಿ ಯೋಗೀಶ್ವರಿ ದತ್ತುನಿಧಿ ಪಟ್ಟಿ ವಾಚಿಸಿದರು. ಶಿಕ್ಷಕಿ ಲಾವಣ್ಯ ವಂದಿಸಿದರು.

LEAVE A REPLY

Please enter your comment!
Please enter your name here