ಸೌತ್ ಇಂಡಿಯಾ ಕರಾಟೆ ಚಾಂಪಿಯನ್‌ ಶಿಪ್ ನಲ್ಲಿ ಸುಳ್ಯದ ವಿದ್ಯಾರ್ಥಿಗಳಿಗೆ ಬಹುಮಾನ

0

 

10 ಸೌತ್ ಇಂಡಿಯಾ ಕರಾಟೆ ಮತ್ತು ಕುಂಗ್-ಫೂ ಓಪನ್ ಚಾಂಪಿಯನ್ ಶಿಪ್ ನಲ್ಲಿ ಸುಳ್ಯದ ವಿದ್ಯಾರ್ಥಿಗಳಿಗೆ ಬಹುಮಾನ ಲಭಿಸಿದೆ‌‌.
ಕರಾಟೆಯ ಕುಮಿಟೆ ವಿಭಾಗದಲ್ಲಿ ಯತೀಶ ಪೆರ್ಲಂಪಾಡಿ ತೃತೀಯ ಬಹುಮಾನ ಪಡೆದಿದ್ದು, ಅಶ್ವಥ್ ಅಡ್ಕಾರು ಅವರು ಕೂಡ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಮಂಜುನಾಥ ಅವರು ದ್ವಿತೀಯ ಸ್ಥಾನ ಪಡೆದರೆ, ಕೀರ್ತನ್ ಕಂದಡ್ಕ ಅವರು ಕಟಾ ವಿಭಾಗದಲ್ಲಿ ಪ್ರಥಮ ಹಾಗೂ ಕುಮಿಟೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದು ಕಟಾ ಸ್ಪರ್ಧೆಯ ವ್ಯಯಕ್ತಿಕ ವಿಭಾಗದಲ್ಲಿ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ. ರಂಜಿತ್ ಕುಮಾರ್ ದುಗ್ಗಲಡ್ಕ ಕಟಾ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ.
ವರ್ಷಿತ್ ಎಂ.ಎನ್. ಅವರು ಕಟಾ ಸ್ಪರ್ಧೆಯ ವ್ಯಯಕ್ತಿಕ ವಿಭಾಗದಲ್ಲಿ ಪ್ರಥಮ ಹಾಗೂ ಕುಮಿಟೆ ಹಾಗೂ ಕಟಾ ವಿಭಾಗದಲ್ಲಿಯೂ ಪ್ರಥಮ ಬಹುಮಾನ ಪಡೆದಿದ್ದಾರೆ.
ಸಹನ ಭಟ್ ಅವರು ಕುಮಿಟೆ ವಿಭಾಗದಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ. ಹಿತೇಶ್ ಕುಮಾರ್ ಅರ್ಭಡ್ಕ ಕಟಾ ವಿಭಾಗದಲ್ಲಿ ತೃತೀಯ ಬಹುಮಾನ ಪಡೆದಿದ್ದಾರೆ. ಧನುಷ್ ಗೌಡ ಅವರು ಕುಮಿಟೆ ವಿಭಾಗದಲ್ಲಿ ಪ್ರಥಮ ಹಾಗೂ ಕಟಾ ವಿಭಾಗದಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ.
ಕರಾಟೆ ಶಿಕ್ಷಕ ಚಂದ್ರಶೇಖರ ಕನಕಮಜಲು ಅವರು ಇವರಿಗೆ ತರಬೇತಿ ನೀಡಿದ್ದಾರೆ.