ಸುಳ್ಯ ತಾಲೂಕು ಗ್ಯಾರೇಜ್ ಮಾಲಕರ ಸಂಘದ ಮಾಸಿಕ ಸಭೆ

0

ನಿವೃತ್ತ ಪ್ರಾಂಶುಪಾಲ ಡಿ. ಕುಶಾಲಪ್ಪ ಗೌಡ ಮತ್ತು ಕೆ. ಪಿ ಸಿ ಸಿ ಸಂಯೋಜಕ ಹೆಚ್.ಎಂ. ನಂದಕುಮಾರ್‌ರಿಗೆ ಸನ್ಮಾನ

ಸುಳ್ಯ ತಾಲೂಕು ಗ್ಯಾರೇಜ್ ಮಾಲಕರ ಸಂಘದ ಮಾಸಿಕ ಸಭೆ ಆ. ೨೮ ರಂದು ವಿಷ್ಣು ಸರ್ಕಲ್‌ನಲ್ಲಿರುವ ಸಂಘದ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ಸಂಘದ ಅಧ್ಯಕ್ಷರಾದ ಮಲ್ಲೇಶ್ ಬೆಟ್ಟಂಪಾಡಿ ವಹಿಸಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಜನಾರ್ದನ ದೊಳ ವರಧಿ ವಾಚಿಸಿದರು.


೭೫ನೇ ಅಮೃತ ಮಹೋತ್ಸವ ಪ್ರಯುಕ್ತ ನಿವೃತ್ತ ಪ್ರಾಂಶುಪಾಲ ಡಿ. ಕುಶಾಲಪ್ಪ ಗೌಡ ಮತ್ತು ಉದ್ಯಮಿ ಕೆ ಪಿ ಸಿ ಸಿ ಸಂಯೋಜಕ ಹೆಚ್. ಎಂ. ನಂದಕುಮಾರ್‌ರವರನ್ನು ಸನ್ಮಾನಿಸಲಾಯಿತು.


ವೇದಿಕೆಯಲ್ಲಿ ಕೋಶಾಧಿಕಾರಿ ಗೋಪಾಲ ನಡುಬೈಲು, ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಭಟ್ ಕೊಡಂಕೇರಿ, ವೆಂಕಟೇಶ್ ಮೇನಾಲ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಶಾಂತಪ್ಪ ಡಿ., ಉಪಾಧ್ಯಕ್ಷ ನಾರಯಣ ಆಚಾರ್ಯ ಪೈಚಾರು, ನಿರ್ದೇಶಕರುಗಳಾದ ರಘುರಾಮ ಜಟ್ಟಿಪಳ್ಳ ,ಅಬ್ದುಲ್ ಬಶೀರ್, ಜತೆ ಕಾರ್ಯದರ್ಶಿ ಮನೋಹರ ಬೊಳ್ಳುರು, ದಿನೇಶ್ ಬಾಚೋಡಿ, ಗಣೇಶ್ ಆಚಾರ್ಯ ಸಂಪಾಜೆ, ಡಿ.ಎನ್. ವೆಂಕಟರಮಣ, ಸದಸ್ಯರು ಭಾಗವಹಿಸಿದ್ದರು.