ಸಂಪಾಜೆ ಸಹಕಾರಿ ಸಂಘದಿಂದ ನಿವೃತ್ತ ಕಾರ್ಯದರ್ಶಿ ದಿ.ಜನಾರ್ದನ ಹೆಚ್.ಬಿ.ಮನೆಗೆ ನೆರವು

0

 

ದ. ಕ.ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸುಮಾರು 33 ವರ್ಷಗಳಿಂದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಹೊದ್ದಟ್ಟಿ ಜನಾರ್ದನ ಹೆಚ್. ಬಿ .ರವರು ಇತ್ತೀಚೆಗೆ ಮೃತರಾಗಿದ್ದು ಅವರ ಮನೆಗೆ ಸಂಘದ ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆಯವರು ತೆರಳಿ ಸಂಘದ ವತಿಯಿಂದ ರೂಪಾಯಿ ಇಪ್ಪತೈದು ಸಾವಿರವನ್ನು ಮೃತರ ಪತ್ನಿಯವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಮಹಮ್ಮದ್ ಕುಂಞಿ ಗೂನಡ್ಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರೇಂದ್ರ ಕುಮಾರ್ ಜೈನ್, ನಿರ್ದೇಶಕರಾದ ಗಣಪತಿ ಭಟ್ ಪಿ. ಎನ್, ಜಗದೀಶ ರೈ ಕೆ. ಆರ್, ಯಮುನಾ ಬಿ.ಎಸ್, ಸುಮತಿ ಎಸ್, ರಾಜೀವಿ ಬೈಲೆ, ಮಾಜಿ ನಿರ್ದೇಶಕ ಉಮ್ಮರ್ ಪಿ. ಎ. ಹಾಗೂ ಸಿಬ್ಬಂದಿ ಕೃಷ್ಣವೇಣಿ ಬಿ. ಕೆ. ರವರು ಹಾಜರಿದ್ದರು.