ಡಿ. 29ರಿಂದ ಕಾನತ್ತೂರು ಕಳಿಯಾಟ ಮಹೋತ್ಸವ
ಜ. 1, 2 ರಂದು ಪ್ರೇತ ವಿಮೋಚನೆ

0


ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನದ ಕಳಿಯಾಟ ಮಹೋತ್ಸವವು ಡಿ. 29 ರಿಂದ ಜ. 2 ರ ತನಕ ನಡೆಯಲಿದೆ. ಡಿ. 28 ರಂದು ಸಾಯಂಕಾಲ ಶುದ್ಧಿ ಕಲಶ, ಪ್ರಾರ್ಥನೆ, ದೈವಕೋಲಧಾರಿಗಳಿಗೆ ಕರ್ತವ್ಯ ಹಂಚಿಕೆ ನಡೆಯಲಿದೆ. ಡಿ. 29 ರಂದು ಭಂಡಾರ ಆಗಮನವಾಗಲಿದ್ದು, ರಾತ್ರಿ ಎಳೆಯೋರ್ ದೈವ ನಡೆಯಲಿದೆ. ಡಿ. 30ರಂದು ಮುಂಜಾನೆ ಚಾಮುಂಡಿ ದೈವ, ಬೆಳಿಗ್ಗೆ ಪಂಜುರ್ಲಿ ದೈವ, ಸಂಜೆ ಮೂತೋರ್ ದೈವ, ರಾತ್ರಿ ಸಿಡಿಮದ್ದು ಪ್ರದರ್ಶನ ನಡೆಯಲಿದ್ದು, ಬಂಬೇರಿಯಾ, ಮಾಣಿಚ್ಚಿ ದೈವ ನಡೆಯಲಿದೆ.
ಡಿ. 31 ರಂದು ಶನಿವಾರ ಚಾಮುಂಡಿ ದೈವ, ಬೆಳಿಗ್ಗೆ ಕುಂಡಕಲೆಯ ದೈವಗಳ ಸಂಚಾರ, ಪಂಜುರ್ಲಿ ದೈವ, ರಾತ್ರಿ ಪಾಷಾಣಮೂರ್ತಿ ದೈವ ನಡೆಯಲಿದೆ.
ಜ.1 ರಂದು ಬೆಳಿಗ್ಗೆ ರಕ್ತೇಶ್ವರಿ ದೈವ, ತುಲಾಭಾರ, ಅಪರಾಹ್ನ, ವಿಷ್ಣುಮೂರ್ತಿ ದೈವ, ಪ್ರೇತ ವಿಮೋಚನೆ ನಡೆಯಲಿದೆ. ಜ. 2ರಂದು ರಕ್ತೇಶ್ವರಿ ದೈವ, ತುಲಾಭಾರ ಅಪರಾಹ್ನವಿಷ್ಣುಮೂರ್ತಿ ದೈವ, ಪ್ರೇತವಿಮೋಚನೆ ನಡೆಯಲಿದೆ. ಜ 3ರಂದು ಬೆಳಿಗ್ಗೆ ಕಳಗ ಒಪ್ಪಿಸುವುದು, ಭಂಡಾರ ನಿರ್ಗಮನ ನಡೆಯಲಿದೆ.
ಹರಿಕೆ ಮಾತು ಹೇಳಿ ಪ್ರಾರ್ಥನೆಗಳು, ಇತರ ಪ್ರಾರ್ಥನೆಗಳು, ತುಲಾಭಾರ ಸೇವೆ, ಪ್ರೇತ ವಿಮೋಚನೆ ಮಾಡಿಸಬೇಕಾದವರು ಮುಂಚಿತವಾಗಿ ಕಚೇರಿಯನ್ನು ಸಂಪರ್ಕಿಸಬೇಕೆಂದು ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ ಪ್ರೊ. ಕೆ. ಪಿ. ಮಾಧವನ್ ನಾಯರ್ ತಿಳಿಸಿದ್ದಾರೆ.