ತಂಟೆಪ್ಪಾಡಿ ನಿನಾದದಲ್ಲಿ ದಿ. ಬಾಬು ಮಾಸ್ಟರ್ ಸಂಸ್ಮರಣೆ

0

ಉದ್ಯಮಿ ವಸಂತ ಶೆಟ್ಟಿ ಬೆಳ್ಳಾರೆಯವರ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ತಂಟೆಪ್ಪಾಡಿಯ ಸಾಂಸ್ಕೃತಿಕ ಕೇಂದ್ರ ನಿನಾದದಲ್ಲಿ ತಂಟೆಪ್ಪಾಡಿ ಸ.ಕಿ.ಪ್ರಾ. ಶಾಲೆಯಲ್ಲಿ ಸುಮಾರು12ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ದಿ. ಬಾಬು ಮಾಸ್ಟರ್ ಕೊಳ್ತಿಗೆ ಸಂಸ್ಮರಣೆ ಮತ್ತು ನಿವೃತ್ತ ಉಪನ್ಯಾಸಕ ಅನಂತಪದ್ಮನಾಭ ಗೋಪಾಲಕಜೆಯವರಿಗೆ ಸನ್ಮಾನ ಕಾರ್ಯಕ್ರಮ ಜ. 1ರಂದು ನಡೆಯಿತು.

ಕಳಂಜ ಬಾಳಿಲ ಪ್ರಾ.ಕೃ. ಪತ್ತಿನ ಸ. ಸಂಘದ ಮಾಜಿ ಉಪಾಧ್ಯಕ್ಷ ಲಿಂಗಪ್ಪ ಗೌಡ ತಂಟೆಪ್ಪಾಡಿ ಸಭಾಧ್ಯಕ್ಷತೆ ವಹಿಸಿದ್ದರು.

ವಾಸುದೇವ ಆಚಾರ್ಯ ಕಿಲಂಗೋಡಿ ಸಂಸ್ಮರಣಾ ನುಡಿಗಳನ್ನಾಡಿದರು. ಯಕ್ಷಗಾನ ಭಾಗವತರಾದ ಪಟ್ಲ‌ ಸತೀಶ್ ಶೆಟ್ಟಿ ನಿವೃತ್ತ ಉಪನ್ಯಾಸಕ ಅನಂತಪದ್ಮನಾಭ ಗೋಪಾಲಕಜೆಯರನ್ನು ಗೌರವಿಸಿದರು. ದಿ. ಬಾಬು ಮಾಸ್ತರ್ ರ ಪುತ್ರ ಕೆ.ಎಸ್.ಆರ್.ಟಿ.ಸಿ. ಉದ್ಯೋಗಿ ಕೃಷ್ಣ ಕುಮಾರ್, ನಿನಾದ ಕಲಾಕೇಂದ್ರದ ಅಧ್ಯಕ್ಷ ಐತ್ತಪ್ಪ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಿನಾದದ ಕಾರ್ಯದರ್ಶಿ ವಸಂತ ಶೆಟ್ಟಿ ಬೆಳ್ಳಾರೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.