ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ಹಾಗೂ ಪಿಕಪ್ ಡಿಕ್ಕಿ

0

ಆಂಬ್ಯುಲೆನ್ಸ್ ಜಖಂ



ಸುಳ್ಯ ಸರ್ಕಾರಿ ಆಸ್ಪತ್ರೆಯಿಂದ ರೋಗಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಸಂದರ್ಭ ಅಡ್ಯಾರ್ ಕಣ್ಣೂರು ಬಳಿ ಆಂಬುಲೆನ್ಸ್ ವಾಹನ ಪಿಕಪ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ ಘಟನೆ ಜನವರಿ 27 ರಂದು ನಡೆದಿದೆ.

ಸುಳ್ಯದ ಆಲಟ್ಟಿ ಗ್ರಾಮದ ಎಲಿಕ್ಕಳ ನಿವಾಸಿ ಆನಂದ ಎಂಬುವವರನ್ನು ಶ್ವಾಸದ ಸಮಸ್ಯೆ ಕಾರಣ ಸುಳ್ಯ ಜ್ಯೋತಿ ಆಸ್ಪತ್ರೆಯ ಆಂಬುಲೆನ್ಸ್ ನಲ್ಲಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ತಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲು ವೈದ್ಯರು ಸೂಚಿಸಿದ್ದರು. ಈ ಹಿನ್ನಲೆಯಲ್ಲಿ ಮಂಗಳೂರಿಗೆ ರೋಗಿಯನ್ನು ಕೊಂಡೊಯ್ಯುತ್ತಿದ್ದ ಸಂದರ್ಭ ಅಡ್ಯಾರ್ ಕಣ್ಣೂರು ಬಳಿ ಪಿಕಪ್ ವಾಹನಕ್ಕೆ ಅಂಬುಲೆನ್ಸ್ ಡಿಕ್ಕಿ ಹೊಡೆದಿದ್ದು ಘಟನೆಯಿಂದ ಅಂಬುಲೆನ್ಸ್ ಚಾಲಕ ಸುಳ್ಯ ಜಯನಗರ ನಿವಾಸಿ ಪ್ರಶಾಂತ್ ಎಂಬವರು ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದು ವಾಹನ ಜಖಂಗೊಂಡಿದೆ.
ಅಂಬುಲೆನ್ಸ್‌ನಲ್ಲಿದ್ದ ರೋಗಿ ಅಪಘಾತಕ್ಕೆ ಮುನ್ನವೇ ಮೃತಪಟ್ಟಿದೆ ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ಇನ್ನು ತಿಳಿಯಬೇಕಾಗಿದೆ.