ಇಂದು ಬೆಳಿಗ್ಗೆ ಸುದ್ದಿ ವೆಬ್ಸೈಟ್ ವರದಿಯಲ್ಲಿ ಅಡ್ಕಾರು ಸಮೀಪ ಬಿಎಸ್ಎನ್ಎಲ್ ಕೇಬಲ್ ಅಳವಡಿಕೆಗೆ ಕಳೆದ 15 ದಿನಗಳ ಹಿಂದೆ ತೆಗೆದಿದ್ದ ಗುಂಡಿಯನ್ನು ಮುಚ್ಚದೇ ಇರುವ ಬಗ್ಗೆ ವರದಿಯನ್ನು ಪ್ರಕಟಿಸಲಾಗಿತ್ತು.
ವರದಿ ಬಿತ್ತರಗೊಂಡ ಕೆಲವೇ ಗಂಟೆಗಳಲ್ಲಿ ಕೂಡಲೇ ಸ್ಪಂದಿಸಿದ ಜಾಲ್ಸೂರು ಗ್ರಾಮ ಪಂಚಾಯತ್ ಪಿಡಿಒ ಸುಬ್ಬಯ್ಯ ರವರು ಗುಂಡಿಗೆ ಮಣ್ಣು ಹಾಕಿಸುವ ಮೂಲಕ ದುರಸ್ತಿ ಕಾರ್ಯ ಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಗ್ರಾಮ ಪಂಚಾಯತ್ ಪಿಡಿಒ ಅಧಿಕಾರಿಯವರ ಈ ಸ್ಪಂದನೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.