ಕನಕಮಜಲು: ಬಾಳೆಹಿತ್ತಿಲಿನಲ್ಲಿ ಸಂಭ್ರಮದ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ

0

ಸುದ್ದಿ ಯೂಟ್ಯೂಬ್ ಚಾನೆಲ್ ಮೂಲಕ ನೇರಪ್ರಸಾರ : 35 ಸಾವಿರಕ್ಕೂ ಅಧಿಕ ಮಂದಿ ವೀಕ್ಷಣೆ

ಕನಕಮಜಲು ಗ್ರಾಮದ ಬಾಳೆಹಿತ್ತಿಲು ಶ್ರೀ ವಯನಾಟ್ ಕುಲವನ್ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವವು ವಿಜೃಂಭಣೆಯಿಂದ ಸಹಸ್ರ ಸಹಸ್ರ ಸಂಖ್ಯೆಯ ಭಕ್ತಜನ ಸಾಗರದ ಮಧ್ಯೆ ಜರುಗುತ್ತಿದ್ದು, ದೈವಂಕಟ್ಟು ಮಹೋತ್ಸವವನ್ನು ಸುಳ್ಯ ಸುದ್ದಿ ಯೂಟ್ಯೂಬ್ ಚಾನೆಲ್ ಮೂಲಕ ಶ್ರೀ ವಯನಾಟ್ ಕುಲವನ್ ದೈವದ ಪೂರ್ಣ ಮಾಹಿತಿಯುಳ್ಳ ನೇರಪ್ರಸಾರ ಮಾಡಲಾಗುತ್ತಿದ್ದು, ಇದುವರೆಗೆ ಸುಮಾರು ಮೂವತ್ತೈದು ಸಾವಿರಕ್ಕೂ ಅಧಿಕ ಮಂದಿ ಭಕ್ತಾದಿಗಳು ದೇಶ ವಿದೇಶದೆಲ್ಲೆಡೆ ವೀಕ್ಷಣೆ ಮಾಡಿದ್ದಾರೆ.
ದೈವಂಕಟ್ಟು ಮಹೋತ್ಸವದ ಪ್ರಯುಕ್ತ ಮಾ.25 ಹಾಗೂ ಮಾ.26ರಂದು ನೇರಪ್ರಸಾರ ಮಾಡಲಾಗುತ್ತಿದೆ.