ಎರ್ಮೆಟ್ಟಿ : ಅಪಾಯದಲ್ಲಿ ವಿದ್ಯುತ್ ಕಂಬ – ಅಪಾಯ ಸಂಭವಿಸುವ ಮೊದಲು ದುರಸ್ಥಿಗೆ ಸ್ಥಳೀಯರ ಒತ್ತಾಯ

0

ನೆಲ್ಲೂರು ಕೆಮ್ರಾಜೆ ಗ್ರಾಮದ ನಾರ್ಣಕಜೆ – ಎರ್ಮೆಟ್ಟಿ – ಬೊಮ್ಮಾರು ರಸ್ತೆಯ ಎರ್ಮೆಟ್ಟಿ ಸೋಮಣ್ಣ ನಾಯಕ್ ಎಂಬವರ ಮನೆ ಸಮೀಪ ಇರುವ ಹೆಚ್ ಟಿ ಮತ್ತು ಎಲ್ ಟಿ ತಂತಿಗಳಿರುವ ವಿದ್ಯುತ್ ಕಂಬ ಬುಡದಿಂದ ತುಂಡಾಗಿ ಸ್ಟೇ ವಾಯರ್ ನ ಸಹಾಯವಿಲ್ಲದೆ ಕೇವಲ ತಂತಿಗಳ ಸಹಾಯದಿಂದ ನಿಂತಿದೆ. ಈ ಬಗ್ಗೆ ಅನೇಕ ಭಾರಿ ಮೆಸ್ಕಾಂ ಇಲಾಖೆಯ ಗಮನಕ್ಕೂ ತಂದಿದ್ದರೂ, ಈ ವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.

ಈ ಮಾರ್ಗವಾಗಿ ಬಹಳಷ್ಟು ಜನಸಾಮಾನ್ಯರು ಓಡಾಡುವುದರಿಂದ ಮತ್ತು ಮಳೆಗಾಲ ಆರಂಭವಾಗುತ್ತಿರುವ ಸಂದರ್ಭದಲ್ಲಿ ಬೀಸುತ್ತಿರುವ ಭಾರೀ ಗಾಳಿಗೆ ಇನ್ನಷ್ಟು ಅಪಾಯ ಎದುರಾಗುವ ಸಂಭವ ಇದೆ. ಇದಕ್ಕೆ ಸಂಬಂಧಪಟ್ಟ ಇಲಾಖೆಯವರು ತಕ್ಷಣ ಕ್ರಮ ಕೈ ಗೊಳ್ಳಬೇಕೆಂದು ಸ್ಥಳೀಯರು ಅಗ್ರಹಿಸಿದ್ದಾರೆ.