ಸುಬ್ರಹ್ಮಣ್ಯ: “ಗ್ರಾಮ ಆರೋಗ್ಯ” ಆರೋಗ್ಯ ತಪಾಸಣಾ ಶಿಬಿರ

0

ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ಕಡಬ ತಾಲೂಕು ಪಂಚಾಯತ್,
ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಹಯೋಗದಲ್ಲಿ
ಗ್ರಾಮ ಪಂಚಾಯತ್ ಅಮೃತ ಆರೋಗ್ಯ ಅಭಿಯಾನದಡಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಫಲಾನುಭವಿಗಳ
“ಗ್ರಾಮ ಆರೋಗ್ಯ” ಆರೋಗ್ಯ ತಪಸಣಾ ಶಿಬಿರ ಮೇ.26 ರಂದು ನಡೆಯಿತು.

ವೇದಿಕೆಯಲ್ಲಿ ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾl ತ್ರಿಮೂರ್ತಿ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾ.ಪಂ ಸದಸ್ಯರುಗಳಾದ ಎಚ್ ಎಲ್ ವೆಂಕಟೇಶ್, ಶಿವರಾಮ ನೆಕ್ರಾಜೆ, ಸುಜಾತ, ಪಿ ಡಿ ಓ ಆಕಾಶ್, ಕಾರ್ಯದರ್ಶಿ ಮಾನಪ್ಪ ಉಪಸ್ಥಿತರಿದರು.
ಶಿವರಾಮ ನೆಕ್ರಾಜೆ ಸ್ವಾಗತಿಸಿದರು, ಆರೋಗ್ಯ ನಿರೀಕ್ಷಿಣಾಧಿಕಾರಿ ಉಮರ್ ಖಾನ್ ವಂದನಾರ್ಪಣೆ ಮಾಡಿದರು.