ಮುರುಳ್ಯ ಶಾಂತಿನಗರ ಶಾಲೆಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯರವರಿಗೆ ಸನ್ಮಾನ

0

ಪ್ರಭಾರ ಮುಖ್ಯ ಶಿಕ್ಷಕಿ ಸರೋಜಿನಿ,ಅತಿಥಿ ಶಿಕ್ಷಕಿ ಸರಿತಾರವರಿಗೆ ಗೌರವಾರ್ಪಣೆ

ಸ ಹಿ ಪ್ರಾ ಶಾಲೆ ಮುರುಳ್ಯ ಶಾಂತಿನಗರದಲ್ಲಿ ಶಾಲಾ ಹಿರಿಯ ವಿದ್ಯಾರ್ಥಿ ಸಂಘ, ಶಾಲಾ ಮಕ್ಕಳು ,ಎಸ್ ಡಿ ಎಂ ಸಿ ,ಶಿಕ್ಷಕ ವೃಂದ,ಅಂಗನವಾಡಿ ಬಾಲ ವಿಕಾಸ ಸಮಿತಿ ಹಾಗೂ ಊರವರ ಪರವಾಗಿ ಶಾಲೆಯ ಹಿರಿಯ ವಿದ್ಯಾರ್ಥಿ ನಿ ಸುಳ್ಯ ತಾಲೂಕಿನ ನೂತನ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯರವರಿಗೆ ಅಭಿನಂದನಾ ಕಾರ್ಯಕ್ರಮ ಆ.12 ರಂದು ನಡೆಯಿತು.

ಹಾಗೂ ಪ್ರಭಾರ ಮುಖ್ಯ ಶಿಕ್ಷಕಿ ಯಾಗಿ ಸೇವೆ ಸಲ್ಲಿಸಿದ ಶ್ರೀಮತಿ ಸರೋಜಿನಿ ಮತ್ತು ಅತಿಥಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಶ್ರೀಮತಿ ಸರಿತಾ ಇವರನ್ನು ಗೌರವಿಸಲಾಯಿತು . ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕುಮಾರಿ ಜಾನಕಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಗ್ರಾಮ ಪಂಚಾಯತ್ ಸದಸ್ಯರುಗಳಾದ ಶ್ರೀಮತಿ ವನಿತಾ ಸುವರ್ಣ , ಶ್ರೀಮತಿ ಪುಷ್ಪಾವತಿ ಶ್ರೀಮತಿ ಶೀಲಾವತಿ ,ಮೋನಪ್ಪ ಗೌಡ ಅಲೇಕಿ ,ಎಸ್ ಡಿ ಎಂ ಸಿ ಅಧ್ಯಕ್ಷರಾದ ದಿನೇಶ್ ನಡುಬೈಲು ಉಪಸ್ಥಿತರಿದ್ದರು.
ಶ್ರೀಮತಿ ಶಾಲಿನಿ ಹಾಗೂ ಲಿಕ್ಷಿತ ನಿರೂಪಿಸಿದರು, ಕುಮಾರಿ ಪ್ರೇಮಲತಾ ವಂದಿಸಿದರು.ಎಸ್ ಡಿ ಎಂ ಸಿಯ ಎಲ್ಲಾ ಸದಸ್ಯರು ಮತ್ತು ಶಿಕ್ಷಕ ವೃಂದ ದವರುಸಹಕರಿಸಿದರು .