ದಿ. ಕುಂಞಿಕಣ್ಣನ್ ಅಡ್ಕಾರುಬೈಲು ವೈಕುಂಠ ಸಮಾರಾಧನೆ – ನುಡಿನಮನ ಸಲ್ಲಿಕೆ

0

ಜಾಲ್ಸೂರು ಗ್ರಾಮದ ಅಡ್ಕಾರುಬೈಲು ನಿವಾಸಿಯಾಗಿದ್ದು, ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಅವಧಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು,

ಇತ್ತೀಚೆಗೆ ನಿಧನರಾದ ದಿ. ಕುಂಞಿಕಣ್ಣನ್ (ಎ.ಕೆ. ಕಣ್ಣನ್) ಅವರ ವೈಕುಂಠ ಸಮಾರಾಧನೆ ಹಾಗೂ ನುಡಿನಮನ ಸಲ್ಲಿಕೆ ಕಾರ್ಯಕ್ರಮವು ಆ.18ರಂದು ಮೃತರ ಮನೆಯಲ್ಲಿ ಜರುಗಿತು.

ಮೃತರ ಅಳಿಯ ಪೊಲೀಸ್ ಇಲಾಖೆಯ ನಿವೃತ್ತ ಎ.ಎಸ್.ಐ. ಭಾಸ್ಕರ ಅಡ್ಕಾರು ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮೃತರ ಬಾವ ಬಿ.ಕೆ. ಕುಮಾರ್ ಮಡಿಕೇರಿ, ಪುತ್ತೂರಿನ ನಿವೃತ್ತ ಎ.ಎಸ್.ಐ. ಸುರೇಶ್ ರೈ,

ಭಾರತೀಯ ತೀಯಾ ಸಮಾಜದ ಸುಳ್ಯ ವಲಯ ಸಮಿತಿ ಅಧ್ಯಕ್ಷ ಪವಿತ್ರನ್ ಗುಂಡ್ಯ ಅವರು ಮೃತ ಕುಂಞಿಕಣ್ಣನ್ ಅವರ ಕುರಿತು ಮಾತನಾಡಿ, ನುಡಿನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮೃತರ ಪತ್ನಿ ಶ್ರೀಮತಿ ಬಿ.ಕೆ. ಶಾರದಾ, ಪುತ್ರಿಯರಾದ ಕೆಯ್ಯೂರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಎ‌.ಕೆ. ನಮಿತ, ಶ್ರೀಮತಿ ಎ.ಕೆ. ಸುಪ್ರೀತ, ಅಳಿಯಂದಿರಾದ ಸುಕುಮಾರ್ ದಾರಂದಕುಕ್ಕು,

ಮೋನಪ್ಪ ಅಳಿಕೆ, ಕುಂಞಿಕಣ್ಣನ್ ಅವರೊಂದಿಗೆ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಅಧಿಕಾರಿಗಳು, ಸುಳ್ಯ ಪೊಲೀಸ್ ಠಾಣೆಯ ಸಿಬ್ಬಂದಿಗಳು,ಪುತ್ತೂರು ಅಬಕಾರಿ ಇಲಾಖಾ ಸಿಬ್ಬಂದಿಗಳು, ಕೆಯ್ಯೂರು ಗ್ರಾಮ ಪಂಚಾಯತಿ ಸಿಬ್ಬಂದಿಗಳು, ಮೃತರ ಹಿತೈಷಿಗಳು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.