ಬೇಂಗಮಲೆಯಲ್ಲಿ ತ್ಯಾಜ್ಯದ ಜೊತೆ ಕಲ್ಲುಸಕ್ಕರೆ ಎಸೆದು ಹೋದ ದುಷ್ಕರ್ಮಿಗಳು

0

ಸುಳ್ಯ ಬೆಳ್ಳಾರೆ ರಸ್ತೆಯ ಬೇಂಗಮಲೆ ರಸ್ತೆ ಬದಿಯಲ್ಲಿ ತ್ಯಾಜ್ಯದ ಜೊತೆ ಕಲ್ಲುಸಕ್ಕರೆ ಎಸೆದು ಹೋಗಿದ್ದಾರೆ.


ಬೇಂಗಮಲೆಯಲ್ಲಿ ಹಲವು ಬಾರಿ ಕಸ ಎಸೆದವರನ್ನು ಪಂಚಾಯತ್ ವತಿಯಿಂದ ಪತ್ತೆ ಹಚ್ಚಿ ದಂಡ ವಿಧಿಸಲಾಗಿತ್ತು.ಆದರೆ ಇಲ್ಲಿ ಮತ್ತೆ ಮತ್ತೆ ತ್ಯಾಜ್ಯ ಎಸೆಯುತ್ತಿದ್ದಾರೆ.
ಹಲವು ಬಾರಿ ಪಂಚಾಯತ್ ವತಿಯಿಂದ ಸಾರ್ವಜನಿಕರ ,ಸಂಘ,ಸಂಸ್ಥೆಗಳ ಸಹಕಾರದೊಂದಿಗೆ ಇಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯುತ್ತಿದೆ.ಆದರೆ ದುಷ್ಕರ್ಮಿಗಳು ಮತ್ತೆ ತ್ಯಾಜ್ಯ ಎಸೆದು ಹೋಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.