ಎಡಮಂಗಲ : ಕಾಲು ಸಂಕದಿಂದ ತೋಡಿಗೆ ಬಿದ್ದು ವ್ಯಕ್ತಿ ಮೃತ್ಯು

0

ಎಡಮಂಗಲ ಗ್ರಾಮದ ಕರಿಂಬಿಲದಲ್ಲಿ ತೋಡಿಗೆ ಹಾಕಿದ ಕಾಲು ಸಂಕದಿಂದ ಜಾರಿ ನೀರಿಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಜ.24 ರಂದು ರಾತ್ರಿ ನಡೆದಿದೆ.
ಕರಿಂಬಿಲ ಶಶಿಕಲಾ ಶೆಟ್ಟಿ ಎಂಬವರ ಜಾಗದಲ್ಲಿ ಕೇರಳ ಮೂಲದ ಸುರೇಶ ಸತ್ಯವನ್ ಎಂಬವರು ಟ್ಯಾಪಿಂಗ್ ಕೆಲಸ ಮಾಡಿಕೊಂಡಿದ್ದರು.
ಜ.24 ರಂದು ತೋಟದಲ್ಲಿ ಸಣ್ಣ ತೋಡಿಗೆ ತಾತ್ಕಾಲಿಕವಾಗಿ ಹಾಕಿದ್ದ ಅಡಿಕೆ ಮರದ ಕಾಲು ಸಂಕದಲ್ಲಿ ದಾಟುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ತೋಡಿಗೆ ಬಿದ್ದಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು.
ಅಗ್ನಿ ಶಾಮಕದಳದವರು ಬಂದು ಮೃತದೇಹವನ್ನು ನದಿಯಿಂದ ಮೇಲಕ್ಕೆತ್ತಿದರು.
ಮೃತಪಟ್ಟ ಸುರೇಶ್ ಸತ್ಯವನ್ ಎಂಬವರು ಮದ್ಯವ್ಯಸನಿಯಾಗಿದ್ದರೆಂದು ತಿಳಿದುಬಂದಿದೆ.
ಈ ಬಗ್ಗೆ ಬಿಜು ಎಂಬವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.