ಪಂಜ: ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ ಉದ್ಘಾಟನೆ

0

ಪಂಜ: ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ ಉದ್ಘಾಟನೆ ಬಾಲ್ಯದಿಂದಲೇ ಕ್ರೀಡೆಗಳನ್ನು ಮೈಗೂಡಿಸಿ ಕೊಳ್ಳಿ-ಶ್ರೇಯಾಂಸ್ ಕುಮಾರ್ ಶೆಟ್ಟಿಮೂಲೆ

ಪಂಚಶ್ರೀ ಶಟಲ್ ಕ್ಲಬ್ ಪಂಜ ಇದರ ವತಿಯಿಂದ ಪುರುಷರ ಮುಕ್ತ ಡಬಲ್ಸ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟವು ಏ.13 ರಂದು ಸಂಜೆ ಪಂಜದ ನಾಯರ್ ಕೆರೆಯ ಲ್ಲಿ ಉದ್ಘಾಟನೆ ಗೊಂಡಿತು.
ಹಿರಿಯ ಶಟಲ್ ಆಟಗಾರ ಶ್ರೇಯಾಂಸ್ ಕುಮಾರ್ ಶೆಟ್ಟಿಮೂಲೆ
ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ”ಕ್ರೀಡೆಗಳಲ್ಲಿ ಯಶಸ್ವಿಯಾಗಿ ಮುನ್ನಡೆಯಲು, ಉತ್ತಮ ತರಬೇತುದಾರರಿಂದ ತರಬೇತಿ ಪಡೆಯ ಬೇಕು. ಬಾಲ್ಯದಿಂದಲೇ ಕ್ರೀಡೆಗಳನ್ನು ಮೈಗೂಡಿಸಿ ಕೊಳ್ಳಿ”ಎಂದು ಅವರು ಹೇಳಿದರು.

ಸಭಾಧ್ಯಕ್ಷತೆನ್ನು ಪಂಚಶ್ರೀ ಶಟಲ್ ಕ್ಲಬ್ ಅಧ್ಯಕ್ಷ ರಮೇಶ್ ಪುತ್ಯ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ
ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ , ಜೇಸಿ ಪಂಜ ಪಂಚಶ್ರೀ ಪೂರ್ವಾಧ್ಯಕ್ಷ ಸೋಮಶೇಖರ ನೇರಳ ಹಾಗೂ ಪಂಚಶ್ರೀ ಶಟಲ್ ಕ್ಲಬ್ ನ ಕಾರ್ಯದರ್ಶಿ ಭರತ್ ನಾಯರ್ ಕೆರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಅಶ್ವಥ್ ರೈ ಕೆಬ್ಲಾಡಿ ಸ್ವಾಗತಿಸಿದರು. ಸಂದೀಪ್ ಪಲ್ಲೋಡಿ
ನಿರೂಪಿಸಿದರು. ರಾಮ್ ಕಿಶೋರ್ ಕೃಷ್ಣನಗರ ವಂದಿಸಿದರು.