ಕೇರ್ಪಳ : ನಾಟಿ ವೈದ್ಯೆ ಗೌರಮ್ಮರಿಗೆ ಬಿಜೆಪಿ ಜಿಲ್ಲಾಧ್ಯಕ್ಷರಿಂದ ಸನ್ಮಾನ

0

ಹಲವಾರು ಜನರಿಗೆ ಹಳ್ಳಿ ಮದ್ದು ನೀಡಿ ಜೀವ ಉಳಿಸಿದ ನಾಟಿವೈದ್ಯೆ ಗೌರಮ್ಮ ಕೇರ್ಪಳ ಇವರನ್ನು 180ನೇ ಬೂತಿನ ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಾಲ ಅವರು ಶಾಲು ಹೊದಿಸಿ ಗೌರವಿಸಿ ಆಶೀರ್ವಾದ ಪಡೆದುಕೊಂಡರು.


ಈ ಸಂದರ್ಭದಲ್ಲಿ ಮಂಡಲ ಬಿಜೆಪಿ ಅಧ್ಯಕ್ಷರಾದ ವೆಂಕಟ್ ವಳಲಂಬೆ, ಪ್ರಧಾನ ಕಾರ್ಯದರ್ಶಿ ವಿನಯ್ ಕಂದಡ್ಕ, ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ,ನಿತಿನ್ ಶೆಟ್ಟಿ, ಸುನಿಲ್ ಕೇರ್ಪಳ, ಜಿನ್ನಪ್ಪ ಪೂಜಾರಿ, ನಗರ ಪಂಚಾಯತ್ ಸದಸ್ಯ ಸುಧಾಕರ್ ಕುರುಂಜಿ ಭಾಗ್, ಸಿಎ. ಬ್ಯಾಂಕ್. ನಿರ್ದೇಶಕ ಶಿವರಾಮ ಕೇರ್ಪಳ, ಚಂದ್ರಶೇಖರ ನಲ್ಲೂರಯ,ಚಂದ್ರಶೇಖರ ಕೇರ್ಪಳ, ತೀರ್ಥರಾಮ ಕೇರ್ಪಳ, ಉಪಸ್ಥಿತರಿದ್ದರು.