ಹಳೆಗೇಟು:ಸಾಂಸ್ಕೃತಿಕ ಸಂಘದ ವಾರ್ಷಿಕ ಮಹಾ ಸಭೆ

0

41ನೇ ವರ್ಷದ ಗಣೇಶೋತ್ಸವ: 3 ದಿನ ಧಾರ್ಮಿಕ, ಸಾಂಸ್ಕೃರ್ತಿಕ ಕಾರ್ಯಕ್ರಮದೊಂದಿಗೆ ನಡೆಸಲು ತೀರ್ಮಾನ

ಸಾಂಸ್ಕೃತಿಕ ಸಂಘ (ರಿ )ಹಳೆಗೆಟು ಸುಳ್ಯ ಇದರ ವಾರ್ಷಿಕ ಮಹಾ ಸಭೆ ಜೂ. 30 ರಂದು ಹಳೆಗೆಟಿನ ವಸಂತಕಟ್ಟೆಯಲ್ಲಿ ನಡೆಯಿತು.

ಅಧ್ಯಕ್ಷರಾದ ಶ್ರೀನಿವಾಸ್ ರಾವ್ ನೇತೃತ್ವದಲ್ಲಿ 41ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಮೂರು ದಿನದ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

ಕಾರ್ಯಕ್ರಮದ ಕೊನೆಯ ದಿನ ಸಾರ್ವಜನಿಕ ಅನ್ನಸಂತರ್ಪಣೆ ಮತ್ತು ವೈಭವದ ಶೋಭಾಯಾತ್ರೆ ನಡೆಸುವುದೆಂದು ತೀರ್ಮಾನಿಸಲಾಯಿತು.

ಸಂಘದ ಕಾರ್ಯದರ್ಶಿ ಶಿವನಾಥ್ ರಾವ್ ಸ್ವಾಗತಿಸಿದರು ,ಅಧ್ಯಕ್ಷರಾದ ಶ್ರೀನಿವಾಸ ರಾವ್ ವಂದನಾರ್ಪಣೆ ಮಾಡಿದರು

ಈ ಸಂದರ್ಭದಲ್ಲಿ ಜೊತೆ ಕಾರ್ಯದರ್ಶಿ ರಾಕೇಶ್ ಕುಂಟಿಕಾನ, ಖಜಾಂಚಿ ಚಿತ್ತರಂಜನ್ ಹಳೆಗೆಟು , ಜ್ಞಾನೇಶ್ವರ ಶೇಟ್ , ಶ್ರೀಜೇಶ್, ಗಣೇಶ್ ಕೊಯಿಂಗೋಡಿ, ಗೌತಮ ಭಟ್,ವಿಜಯ್ ಕುಮಾರ್, ಶಶಿಧರ್ ಕಜೆ, ರಾಜೇಶ್ ಮೊದಲಾದವರು ಉಪಸ್ಥಿತರಿದ್ದರು.