ಅರೆಭಾಷೆ ಪುಸ್ತಕ ಕೊಡುಗೆ ಮತ್ತು ಉಪನ್ಯಾಸ ಕಾರ್ಯಕ್ರಮ
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ಇವರ ಸಂಯುಕ್ತ ಆಶ್ರಯದಲ್ಲಿ ಅರೆಭಾಷೆ ಸಾಂಸ್ಕೃತಿಕ ಸಂಘ ಉದ್ಘಾಟನೆ ಹಾಗೂ ಅರೆಭಾಷೆ ಪುಸ್ತಕ ಕೊಡುಗೆ ಮತ್ತು ಉಪನ್ಯಾಸ ಕಾರ್ಯಕ್ರಮ ಮೇ 24 ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಲೋಕೇಶ್ ಊರುಬೈಲು ಇವರು ಪ್ರಾಸ್ತಾವಿಕ ನುಡಿಗಳೊಂದಿಗೆ ಕಾರ್ಯಕ್ರಮ ಉದ್ದೇಶವನ್ನು ತಿಳಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಕೆವಿಜಿ ಆಯುರ್ವೆದ ಕಾಲೇಜಿನ ಪ್ರಾಂಶುಪಾಲ ಡಾ. ಡಿ. ವಿ. ಲೀಲಾದರ್ ರವರು ನೆರವೇರಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಇದರ ಸದಸ್ಯ ಹಾಗೂ ಅರೆಭಾಷೆ ಕವಿಗ ಯೋಗೀಶ ಹೊಸೊಳಿಕೆ ಇವರು ಅರೆಭಾಷೆ ಬೆಳೆದು ಬಂದ ದಾರಿ ಮತ್ತು ಅರೆಭಾಷೆ ಇತಿಹಾಸ, ಲೇಖಕರು,ಕವನಗಳು ಮುಂತಾದ ವಿಷಯದ ಕುರಿತು ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಸತೀಶ್ ಕುಮಾರ್ ಕೆ. ಆರ್ ಇವರು ಅರೆಭಾಷೆ ಮತ್ತು ಬೇರೆ ಭಾಷೆಗಿನ ಸಂಬಂಧದ ಕುರಿತು ಹೇಳಿದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಅಧ್ಯಕ್ಷತೆ ವಹಿಸಿದ್ದರು.








ಅಕಾಡೆಮಿ ಸದಸ್ಯ ತೇಜಕುಮಾರ್ ಕುಡೆಕಲ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಕಾಡೆಮಿ ವತಿಯಿಂದ ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ಇಲ್ಲಿಯ ಗ್ರಂಥಾಲಯಕ್ಕೆ ಅರೆಭಾಷೆಗೆ ಸಂಬoಧಿಸಿದ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು. ಕಾಲೇಜಿನಲ್ಲಿ ನೂತನವಾಗಿ ಸ್ಥಾಪನೆಗೊಂಡ ಅರೆಭಾಷೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ಪದಾಧಿಕಾರಿಗಳಿಗೆ ಪುಸ್ತಕ ನೀಡಿ ಸ್ವಾಗತಿಸಲಾಯಿತು.
ವಿದ್ಯಾರ್ಥಿನಿ ವಷಿಕಾ ಉಳುವಾರು ಸ್ವಾಗತಿಸಿ, ಲೋಕೇಶ್ ಊರುಬೈಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಆಶಿತಾ ಮಲ್ಲಾರ ವಂದಿಸಿದರು. ಯಕ್ಷಿತಾ ಲೆಕ್ಕೆಶ್ರೀಮೂಲೆ ಕಾರ್ಯಕ್ರಮ ನಿರೂಪಿಸಿದರು..
ನೂತನವಾಗಿ ರಚನೆಯಾದ ಅರೆಭಾಷೆ ಸಾಂಸ್ಕೃತಿಕ ಸಂಘ ಇದರ ಪದಾಧಿಕಾರಿಗಳ ವಿವರ :
ಅಧ್ಯಕ್ಷರಾಗಿ ಹಿತೇಶ್ ಕುದ್ಕುಳಿ, ಉಪಾಧ್ಯಕ್ಷರಾಗಿ ಮಾನಸ ಎಂ, ಕಾರ್ಯದರ್ಶಿಯಾಗಿ ಯುವರಾಜ ಬಾಳೆಗುಡ್ಡೆ, ಜೊತೆ ಕಾರ್ಯದರ್ಶಿಯಾಗಿ ಜಯದೇವ, ಪ್ರಿಯ ಕೆ, ಖಜಾಂಜಿಯಾಗಿ ತರುಣ್, ಪದಾಧಿಕಾರಿಗಳಾಗಿ ನವ್ಯಶೀ, ತಶ್ವಿ, ವೀಣಾ, ದಿವ್ಯ ಜ್ಯೋತಿ, ಯಕ್ಷಿತಾ, ತನುಷಾ ಕೆ.ಜೆ, ಆಶಿತಾ ಮಲ್ಲಾರ, ಪ್ರಜ್ಞಾ, ರಕ್ಷಿತಾ, ಕೃಪಾಶ್ರೀ, ಅಮೂಲ್ಯ ಎ.ಕೆ, ಭುವಿತ, ಶ್ರೇಯ, ಚೈತ್ರ, ಮನ್ವಿತ್
ಬ್ರಿಜೇಶ್ , ವಷಿಕಾ, ಕೃತಿಕ್, ಗೌತಮ್, ದಕ್ಷತ್, ಲಿಖಿತ್ ರವರು ಆಯ್ಕಯಾದರು.










