ಅತಿಕರಮಜಲು: ಹಜ್ ಯಾತ್ರೆ ಕೈಗೊಂಡವರಿಗೆ ಸನ್ಮಾನ

0

ಜಮಾಅತ್ ಕಮಿಟಿಯ ವತಿಯಿಂದ ಪವಿತ್ರ ಹಜ್ ಯಾತ್ರೆ ಕೈಗೊಂಡ ಅಬ್ದುಲ್ಲ ಭಾರತ್ ಪಾಜಪ್ಪಲ್ಲ ಇವರನ್ನು ಭಾರತ್ ಹೌಸ್ ನಲ್ಲಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಜಮಾಅತ್ ಖತೀಬ್ ಯಾಸೀರ್ ಅರಾಫತ್ ಕೌಸರಿ ಉಸ್ತಾದರು ದುಆ ಆಶೀರ್ವಚನ ಹಾಗೂ ಹಿತನುಡಿಗಳನ್ನು ನೀಡಿದರು.

ಜಮಾಅತ್ ಅಧ್ಯಕ್ಷರಾದ ಹಾಜಿ ಪಿ ಇಸಾಕ್ ಸಾಹೇಬ್, ಗೌರವಾನ್ವಿತ ಖತೀಬ್ ಯಾಸೀರ್ ಅರಾಫತ್ ಕೌಸರಿ ಉಸ್ತಾದ್, ಜಮಾಅತ್ ಕಮಿಟಿಯ ಸದಸ್ಯರು ಉಪಸ್ಥಿತರಿದ್ದರು.