ಅಂಬಟಡ್ಕ ಶ್ರೀ ವೆಂಕಟರಮಣ ದೇವ ಮಂದಿರದ ಅಧ್ಯಕ್ಷರಾಗಿ ಪ್ರಕಾಶ ಶೆಣೈ ಆಯ್ಕೆ

0

ಸುಳ್ಯ ಅಂಬೆಟಡ್ಕದ ಶ್ರೀ ವೆಂಟರಮಣ ದೇವ ಮಂದಿರದ ವಾರ್ಷಿಕ ಮಹಾಸಭೆಯು ಜೂ.೧೩ ರಂದು ನಡೆಯಿತು. ಅಧ್ಯಕ್ಷತೆಯನ್ನು ವೆಂಕಟರಮಣ ದೇವ ಮಂದಿರದ ಅಧ್ಯಕ್ಷ ಕೃಷ್ಣ ಕಾಮತ್ ವಹಿಸಿದ್ದರು. ಸುಧಾಕರ್ ಕಾಮತ್ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು.

ಸಭೆಯಲ್ಲಿ ನೂತನ ಆಡಳಿತ ಮಂಡಳಿಯನ್ನು ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಬಿ.ಪ್ರಕಾಶ್ ಶೆಣೈ, ಕಾರ್ಯದರ್ಶಿಯಾಗಿ ಜಿ.ಜಿ.ನಾಯಕ್, ಕೋಶಾಧಿಕಾರಿಯಾಗಿ ಕೆ.ಪ್ರದೀಪ್ ಪ್ರಭು ಆಯ್ಕೆಯಾದರು. ಟ್ರಸ್ಟಿಗಳಾಗಿ ಎಂ.ಗಿರಿಧರ ಹೆಗ್ಡೆ, ಚೆನ್ನಕೇಶವ ಭಂಡಾರಿ, ಅನೂಪ್ ಪೈ, ಗೌತಮ್ ಭಟ್ ಆಯ್ಕೆಯಾದರು. ಕೆ.ಸುಧಾಕರ ಕಾಮತ್ ಸ್ವಾಗತಿಸಿ, ಗೌತಮ್ ಭಟ್ ವಂದಿಸಿದರು.