ಸುಳ್ಯಕ್ಕೆ ಬಂದ ಉತ್ತರಕನ್ನಡ ಮಹಿಳೆಗೆ ಸಾಂತ್ವನ ಕೇಂದ್ರದಲ್ಲಿ ಆಶ್ರಯ

0

ಮನೆಯವರ ಪತ್ತೆಗೆ ಮನವಿ

ಉತ್ತರಕನ್ನಡ ಜಿಲ್ಲೆ ಹೊನ್ನಾವರದವರೆಂದು‌ ಹೇಳಲಾಗುವ ಮಹಿಳೆಯೊಬ್ಬರು ಸುಳ್ಯ ಬಸ್ ನಿಲ್ದಾಣದಲ್ಲಿ ಪತ್ತೆಯಾಗಿದ್ದು, ಪೋಲೀಷರಿಗೆ ವಿಷಯ ತಿಳಿದು ಠಾಣೆಗೆ‌ ಕರೆದುಕೊಂಡು ಹೋದರು.
ಆದರೆ ಆಕೆಯನ್ನು ವಿಚಾರಿಸಿದರೂ ಯಾವುದೇ ಮಾಹಿತಿ ಆಕೆ ನೀಡುತ್ತಿಲ್ಲ. ರಾತ್ರಿಯಾದುದರಿಂದ ಆ ಮಹಿಳೆಯನ್ನು ಸುಳ್ಯದ ಪೋಲೀಸರು ಆ ಮಹಿಳೆಯನ್ನು ಸುಳ್ಯದ ಸಾಂತ್ವನ ಕೇಂದ್ರಕ್ಕೆ ಸೇರಿಸಿದರು.

ಇದೀಗ ಅವರ ಮನೆಯವರ ಪತ್ತೆಗಾಗಿ ಹುಡುಕಾಟ ನಡೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲೂ ಮಹಿಳೆಯ ಪತ್ತೆಗಾಗಿ ಮನವಿ ಮಾಡಿಕೊಳ್ಳಲಾಗಿದೆ.