ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ವನಮಹೋತ್ಸವ

0

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಸುಳ್ಯ ಮತ್ತು ಅಮೃತ ಸ್ತ್ರೀ ಶಕ್ತಿ ಗೊಂಚಲು ಹರಿಹರ ಪಲ್ಲತ್ತಡ್ಕ ಇದರ ಜಂಟಿ ಸಹಯೋಗದೊಂದಿಗೆ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ತಾ.17ರಂದು ವನಮಹೋತ್ಸವ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಯಿತು.

ದೇವಸ್ಥಾನದ ವಠಾರದಲ್ಲಿ ತುಳಸಿ ಹಾಗು ಹಣ್ಣಿನ ಗಿಡಗಳನ್ನು ನೆಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಕಿಶೋರ್ ಕೂಜುಗೋಡು, ಸದಸ್ಯ ರಾದ ಚಂದ್ರಹಾಸ ಶಿವಾಲ, ರೇಷ್ಮಾ ಕಟ್ಟೆಮನೆ, ಅಮೃತ ಗೊಂಚಲಿನ ಅಧ್ಯಕ್ಷರಾದ ಶ್ರೀಮತಿ ಲತಾ ಹಿಮ್ಮತ್, ಮಹಿಳಾ ಮಂಡಲದ ಸದಸ್ಯರಾದ ತಾರಾ ಮಲ್ಲಾರ, ಕೊಲ್ಲಮೊಗ್ರ ವಲಯ ಮೇಲ್ವೀಚಾರಕಿಯಾರಾದ ಶ್ರೀಮತಿ ವಿಜಯ.ಜೆ ಡಿ ಹಾಗು ಸ್ತ್ರೀ ಶಕ್ತಿ ಗುಂಪಿನ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು ಮತ್ತು ದೇವಲದ ಸಿಬ್ಬಂದಿಗಳು ಸಹಕರಿಸಿದರು. ಕಾರ್ಯಕ್ರಮವನ್ನು ಶ್ರೀಮತಿ ಅಮಿತ ಸ್ವಾಗತಿಸಿ ಅನಂತೇಶ್ವರಿ ವಂದಿಸಿದರು