ಸುಳ್ಯದ ಜಾಗೃತಿ ವಿದ್ಯಾರ್ಥಿ ತಂಡದ ವತಿಯಿಂದ ಸೇವಾಜೆ ಶಾಲೆಯಲ್ಲಿ ವನಮಹೋತ್ಸವ

0

ಸುಳ್ಯದ ಜಾಗೃತಿ ವಿದ್ಯಾರ್ಥಿ ಬಳಗ ಹಾಗು ರೋಟರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಜೂನಿಯರ್ ರೆಡ್ ಕ್ರಾಸ್ ಘಟಕ ಇದರ ಜಂಟಿ ಆಶ್ರಯದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಜೂನ್ 23 ರಂದು ದ.ಕ ಜಿಲ್ಲೆ ದೇವಚಳ್ಳ ಗ್ರಾಮ ದ ಸೇವಾಜೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಆಚರಿಸಲಾಯಿತು ಹೊಸ ತಂಡ ಜಾಗೃತಿಯ ಎರಡನೇ ಕಾರ್ಯಕ್ರಮ ಇದಾಗಿತ್ತು .

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ರೋಟರಿ ಪಿ.ಯು ಕಾಲೇಜಿನ ಪ್ರಾಂಶುಪಾಲರಾದ ಶೋಭಾ ಬೊಮ್ಮೆಟ್ಟಿ ಯವರು ಪರಿಸರ ಸಂರಕ್ಷಣೆಯ ಬಗ್ಗೆ ವಿವರಿಸಿದರು .ಕಾರ್ಯಕ್ರಮದಲ್ಲಿ ಜೂನಿಯರ್ ರೆಡ್ ಕ್ರಾಸ್ ಘಟಕದ ಕೌನ್ಸಿಲರ್ ಹರ್ಷಿತ್ ಜಿ. ಜೆ , ಉಪನ್ಯಾಸಕಿಯರು ಶ್ರೀಮತಿ ಕೀರ್ತಿ.ಕೆ ಮತ್ತು ಮೌಸಮಿ , ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸೇವಾಜೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದಾ ಮತ್ತು ಶಿಕ್ಷಕ ವೃಂದದವರು ,ಜಾಗೃತಿ ಬಳಗದ ಪ್ರತಿನಿಧಿಗಳು ಹಾಗು ಸರ್ವಸದಸ್ಯರ ಮತ್ತು ರೆಡ್ ಕ್ರಾಸ್ ಘಟಕದ ಪ್ರತಿನಿಧಿಗಳು ಉಪಸ್ಥಿತರಿದ್ದರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಅಶ್ವಿನಿ ಸ್ವಾಗತಿಸಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಸಾಂತಪ್ಪ ರೈ ಅಂಗಡಿಮಜಲು ವಂದಿಸಿದರು .