ಸುಳ್ಯ ಶಿವಳ್ಳಿ ಸಂಪನ್ನ ವತಿಯಿಂದ ರಾಘವೇಂದ್ರ ಮಠದಲ್ಲಿ ತಪ್ತ ಮುದ್ರಾಧಾರಣೆ

0

ಸುಳ್ಯ ತಾಲೂಕು ಶಿವಳ್ಳಿ ಸಂಪನ್ನ ವತಿಯಿಂದ ಸುಬ್ರಹ್ಮಣ್ಯ ಮಠಾಧೀಶರಾದ
ಶ್ರೀಶ್ರೀಶ್ರೀವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರಿಂದ ತಪ್ತ ಮುದ್ರಾಧಾರಣಾ ಕಾರ್ಯಕ್ರಮ ಜೂ.29 ರಂದು ಸುಳ್ಯ ಶ್ರೀ ಗುರುರಾಘವೇಂದ್ರ ಮಠದಲ್ಲಿ ಜರುಗಿತು. ಅಪರಾಹ್ನ ಸ್ವಾಮೀಜಿಯವರಿಂದ ತಪ್ತ ಮುದ್ರಾಧಾರಣಾ ಕಾರ್ಯಕ್ರಮ ಆರಂಭವಾಯಿತು.


ಶಿವಳ್ಳಿ ಸಂಪನ್ನದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು,
ಗುರು ರಾಘವೇಂದ್ರ ಮಠದ ಬೃಂದಾವನ ಸೇವಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಶ್ರೀಕೃಷ್ಣ ಸೋಮಯಾಗಿ ಮತ್ತು ಟ್ರಸ್ಟಿನ ಸದಸ್ಯರು, ಮಠದ ಪ್ರಧಾನ ಅರ್ಚಕ ಶ್ರೀಹರಿ ಎಳಚಿತ್ತಾಯ, ಸಂಚಾಲಕ ಪ್ರಕಾಶ್ ಮೂಡಿತ್ತಾಯ, ಸಮಿತಿಯ ಸದಸ್ಯರು ಹಾಗೂ ಸ್ಥಳೀಯ ಭಕ್ತಾದಿಗಳು ಭಾಗವಹಿಸಿದರು.