ತ್ಯಾಜ್ಯ ಎಸೆದವರಿಗೆ ಐವರ್ನಾಡು ಪಂಚಾಯತ್ ‘ದಂಡ’ ಪ್ರಯೋಗ

0

5000 ದಂಡದ ಜತೆಗೆ ತ್ಯಾಜ್ಯ ಎಸೆದವರಿಂದಲೇ ವಿಲೇವಾರಿ ಮಾಡಿಸಿದ ಪಂಚಾಯತ್

ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಮರ್ವತ್ತಡ್ಕ ಎಂಬಲ್ಲಿ ತ್ಯಾಜ್ಯ ಎಸೆದ ದರ್ಖಾಸ್ತು ನಿವಾಸಿಗಳಿಗೆ ರೂ 5000 ದಂಡ ವಿಧಿಸಿದ ಘಟನೆ ಇಂದು ನಡೆದಿದೆ.

ಪಂಚಾಯತ್ ವತಿಯಿಂದ ನಡೆಯುವ ಮಾಸಿಕ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗ್ರಾಮಸ್ಥರು ಮರ್ವತ್ತಡ್ಕದಲ್ಲಿ ಎಸೆದಿದ್ದ ತ್ಯಾಜ್ಯ ತುಂಬಿದ್ದ ಬ್ಯಾಗ್ ಪರಿಶೀಲಿಸಿದ್ದರು.

ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ಯಾಮ್ ಪ್ರಸಾದ್ ಎಂ ಆರ್ ರವರು ತ್ಯಾಜ್ಯ ಎಸೆದ ತ್ಯಾಗರಾಜ ಎಂಬವರನ್ನು ಪತ್ತೆ ಹಚ್ಚಿ ರೂ 5000 ದಂಡ ವಿಧಿಸಿ ತ್ಯಾಜ್ಯ ಎಸೆದವರಿಂದಲೇ ತ್ಯಾಜ್ಯವನ್ನು ವಿಲೇವಾರಿಗೊಳಿಸಿದ್ದಾರೆಂದು ತಿಳಿದು ಬಂದಿದೆ.