ಕಲ್ಲಪಳ್ಳಿ- ಪಾಣತ್ತೂರು ಸಂಪರ್ಕದ ರಸ್ತೆಯಲ್ಲಿ ಮಣ್ಣು ಕುಸಿತ – ವಾಹನ ಸಂಚಾರಕ್ಕೆ ಅಡಚಣೆ

0

ಸುಳ್ಯದಿಂದ ಅಂತರಾಜ್ಯ ಸಂಪರ್ಕದ ಪಾಣತ್ತೂರು ರಸ್ತೆಯ ಮಧ್ಯೆ ಕಲ್ಲಪಳ್ಳಿ ಗಡಿ ಪ್ರದೇಶದಲ್ಲಿ ಬರೆ ಕುಸಿತಗೊಂಡು ಮಣ್ಣು ರಸ್ತೆಯ ಮೇಲೆ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆಯುಂಟಾಯಿತು.

ಕಳೆದ ‌ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಣ್ಣು ಕುಸಿಯತೊಡಗಿದೆ‌.
ಕಳೆದ ವರುಷ ಮಳೆಗಾಲದಲ್ಲಿ ಈ ಭಾಗದಲ್ಲಿ ಮಣ್ಣು ಕುಸಿತಗೊಂಡಿತ್ತು.


ಇಂದು ಬೆಳಗ್ಗೆ ರಸ್ತೆಯ ಮೇಲೆ ಮಣ್ಣು ಬಿದ್ದುದರಿಂದ ಕೆಲ ಕಾಲ ವಾಹನ ಸಂಚಾರಕ್ಕೆ ಅಡಚಣೆಯಾಯಿತು.
ಬಳಿಕ ಸ್ಥಳೀಯ ನಾಗರಿಕರ ಸಮಕ್ಷಮದಲ್ಲಿ ಮಣ್ಣು ತೆರವು ಗೊಳಿಸುವ ಕಾರ್ಯಾಚರಣೆ ನಡೆಯಿತು.
ಮಳೆ ಇದೇ ರೀತಿ ಮುಂದುವರಿದಲ್ಲಿ ಮತ್ತೆ ಬರೆ ಕುಸಿಯುವ ಸಾಧ್ಯತೆ ಇದೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.