ಸಂಪಾಜೆ ಸಹಕಾರಿ ಸಂಘದ ವತಿಯಿಂದ ಮರಣನಿಧಿ ಸಾಂತ್ವನ ಹಸ್ತಾಂತರ

0


ದ. ಕ. ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಆನಂದ ಪಿ. ಎಲ್. ರವರ ಪತ್ನಿಯಾದ ಜಯಲಕ್ಷ್ಮಿ ಪೇರಾಲು ಇವರು ಮೃತಪಟ್ಟಿದ್ದು ಅವರ ಮನೆಗೆ ಸಂಘದ ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆಯವರು ತೆರಳಿ ಸಂಘದ ವತಿಯಿಂದ ನೀಡಲ್ಪಡುವ ಮರಣ ನಿಧಿ ರೂಪಾಯಿ ಹತ್ತು ಸಾವಿರವನ್ನು ಅವರ ಮನೆಯವರಿಗೆ ಹಸ್ತಾಂತರಿಸಿದರು.


ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಮಹಮ್ಮದ್ ಕುಂಞಿ ಗೂನಡ್ಕ, ನಿರ್ದೇಶಕರಾದ ಗಣಪತಿ ಭಟ್ ಪಿ. ಎನ್, ಹಮೀದ್ ಹೆಚ್ , ಯಮುನಾ ಬಿ.ಎಸ್ ಮತ್ತು ಸುಮತಿ ಎಸ್. ರವರು ಹಾಜರಿದ್ದರು.