ನೆಲ್ಲೂರು ಕೆಮ್ರಾಜೆ : ಬರೆ ಜರಿದು ಮನೆಗೆ ಹಾನಿ

0

ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಬರೆ ಜರಿದು ಮನೆಯ ಗೋಡೆಗೆ ಹಾನಿಯಾದ ಘಟನೆ ನೆಲ್ಲೂರು ಕೆಮ್ರಾಜೆ ಗ್ರಾಮದ ಕೆರೆಮೂಲೆ ಎಂಬಲ್ಲಿಂದ ವರದಿಯಾಗಿದೆ.‌

ಕೆರೆಮೂಲೆ ಬಾಲಕೃಷ್ಣ ನಾಯಕ್ ಎಂಬವರ ಮನೆಗೆ ನಿನ್ನೆ ಮಧ್ಯಾಹ್ನದ ಸುಮಾರಿಗೆ ಬರೆ ಜರಿದಿತ್ತು.‌ ಮಾಹಿತಿ ತಿಳಿದ ತಕ್ಷಣ ನೆಲ್ಲೂರು ಕೆಮ್ರಾಜೆ ಗ್ರಾ.ಪಂ‌ ಉಪಾಧ್ಯಕ್ಷ ಧನಂಜಯ ಕುಮಾರ್ ಮತ್ತು ಗ್ರಾಮ ಆಡಳಿತ ಅಧಿಕಾರಿ ಮಾರುತಿಯವರು ಸ್ಥಳಿಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ರಾತ್ರಿಯ ವೇಳೆ ಕೂಡ ಬರೆ ಜರಿಯುವ ಆತಂಕ ಇದ್ದ ಕಾರಣ ಮನೆಯವರನ್ನು ಶುಭಾಶ್ಚಂದ್ರ ನಾಯಕ್ ಕೆರೆಮೂಲೆಯವರ ಮನೆಯಲ್ಲಿರುವಂತೆ ಸೂಚಿಸಿದರೆಂದು ತಿಳಿದು ಬಂದಿದೆ.