ಜಾಗೃತಿ ಸುಳ್ಯದ ವತಿಯಿಂದ “ಇನ್‌ಸೈಟ್”-ವಿದ್ಯಾರ್ಥಿಗಳಿಗೆ ಪ್ರೇರಣಾ ಕಾರ್ಯಗಾರ

0


ಜಾಗೃತಿ ತಂಡ ಸುಳ್ಯ ಇದರ ವತಿಯಿಂದ ಸರಕಾರಿ ಪ್ರೌಢಶಾಲೆ ಅಜ್ಜಾವರದಲ್ಲಿ ಜುಲೈ ೮ ರಂದು ವಿದ್ಯಾರ್ಥಿಗಳಿಗೆ ಪ್ರೇರಣಾ ಕಾರ್ಯಕ್ರಮ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿದ ಡಾ:ನಾರಾಯಣ ಶೇಡಿಕಜೆಯವರು ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಶೈಕ್ಷಣಿಕ ಮಾಹಿತಿಯನ್ನು ವಿದ್ಯಾರ್ಥಿಗಳ ಓದು ಹೇಗಿರಬೇಕು ಯಾವ ರೀತಿ ತಯಾರಿ ಮಾಡಬೇಕು ಮುಂತಾದ ಮಾಹಿತಿಗಳೊದಿಗೆ ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು. ಜಾಗೃತಿ ತಂಡದ ಸದಸ್ಯರಾದ ಶ್ರಾವಣ್ ಶೇಡಿಕಜೆ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರವiದ ರೂಪುರೇಶೆಯನ್ನು ವಿವರಿಸಿದರು.


ಈಸಂದರ್ಭದಲ್ಲಿ ವೇದಿಕೆಯ ಮೇಲೆ ಶಾಲೆಯ ಹಿರಿಯ ಶಿಕ್ಷಕಿ ವಿದ್ಯಾಶಂಕರಿ ಎಸ್ ಜಾಗೃತಿ ತಂಡದ ಸದಸ್ಯರುಗಳಾದ ತನುಷ್ ಕೆ.ಟಿ ಹಾಗೂ ಧೀರಜ್ ಪುರ ಉಪಸ್ಥಿತರಿದ್ದರು.
ಶಾಲಾ ಮುಖ್ಯೊಪಾಧ್ಯಾಯರಾದ ಗೋಪಿನಾಥ್ ಎಂ ಸ್ವಾಗತಿಸಿ ಸದಸ್ಯರಾದ ಭುವನಶ್ರೀ ವಂದಿಸಿದರು , ದಿಶಾಲಕ್ಷಿ ಆರ್ ಭಟ್ ನಿರೂಪಿಸಿದರು