ಪೆರಾಜೆ ಪ್ರಾ.ಕೃ.ಪ.ಸ.ಸಂಘದ ಮಹಾಸಭೆ

0

ಪೆರಾಜೆ ಪ್ರಾ.ಕೃ.ಪ.ಸ.ಸಂಘದ ಮಹಾಸಭೆಯು ಜು.09ರಂದು ಪೆರಾಜೆ ಶ್ರೀ ಅನ್ನಪೂರ್ಣೇಶ್ವರಿ ಕಲಾಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೊಸೈಟಿ ಅಧ್ಯಕ್ಷರಾದ ನಾಗೇಶ್ ಕುಂದಲ್ಪಾಡಿ ಯವರು ವಹಿಸಿದರು. ಹಿಂದಿನ ಅವಧಿಯ ನಿರ್ದೇಶಕರು ಹಾಗೂ ನೂತನ ಆಡಳಿತ ಮಂಡಳಿಯ ಜಂಟಿ ಆಶ್ರಯದಲ್ಲಿ ನಡೆಯಿತು.

ಕಾರ್ಯಕ್ರಮದ ಲೆಕ್ಕಪತ್ರ ಮಂಡನೆಯನ್ನು ಸೊಸೈಟಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಲೋಕೇಶ್ ವಾಚಿಸಿದರು. ಸಭೆಯಲ್ಲಿ ಲೋಕನಾಥ ಅಮೆಚೂರು, ತೇಜೇಶ್ವರ ಅಮೆಚೂರು, ಆರ್.ಡಿ. ಆನಂದ, ಎನ್.ಎ.ಜಿತೇಂದ್ರ, ಹೊನ್ನಪ್ಪ ಕೊಳಂಗಾಯ ಮೊದಲಾದವರು ಲೆಕ್ಕಪತ್ರ ಮಂಡನೆಯ ಬಗ್ಗೆ ಚರ್ಚಿಸಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರು, ಹಿಂದಿನ ನಿರ್ದೇಶಕರು, ನೂತನ ನಿರ್ದೇಶಕರು ಉಪಸ್ಥಿತರಿದ್ದರು.