ಜಾಲ್ಸೂರು ಶಕ್ತಿ ಕೇಂದ್ರದ ಬಿಜೆಪಿ ಅಧ್ಯಕ್ಷ ‌ಜಯರಾಜ್ ಕುಕ್ಕೆಟ್ಟಿ ಯವರ ಮನೆಗೆ ಸಿಡಿಲು‌ ಬಡಿದು‌ ಹಾನಿ ಸಂಭವಿಸಿದ ಘಟನೆ ಜು.11 ರಂದು ವರದಿಯಾಗಿದೆ.

ಮಧ್ಯಾಹ್ನ ಮಳೆ ಸುರಿಯುತ್ತಿದ್ದ ವೇಳೆ ಒಮ್ಮಿಂದೊಮ್ಮಲೆ ಮನೆಯ ಸಮೀಪವಿದ್ದ ಪಪ್ಪಾಯಿ ಮರಕ್ಕೆ ಸಿಡಿಲು‌ ಬಡಿಯಿತೆಂದು ಅಲ್ಲಿಂದ ಮನೆಯ ವಿದ್ಯುತ್ ಮೀಟರ್ ಗೆ ತಾಗಿತು. ಸಿಡಿಲು ಅಪ್ಪಳಿಸಿದ ರಭಸಕ್ಕೆ ಮನೆಯ ಸ್ವಿಚ್‌ಬೋರ್ಡ್ ಗಳು ಪುಡಿಯಾಗಿ‌ದೆ. ಗೋಡೆಗಳು ಒಡೆದು ಬಿರುಕುಬಿಟ್ಟಿದೆ. ಪಪ್ಪಾಯಿ ಮರ ಕೂಡಾ ಛಿದ್ರಗೊಂಡಿದೆ ಎಂದು ತಿಳಿದುಬಂದಿದೆ.