ಎ.ಕೆ.ಹಿಮಕರ್ ರವರು ಕನ್ನಡಕ್ಕೆ ಅನುವಾದಿಸಿದ್ದ ಕೃತಿ ಬಿಡುಗಡೆ

0

ಖ್ಯಾತ ಕಲಾವಿದ ಜಾನ್ ದೇವರಾಜ್ ರಚಿಸಿರುವ ಸಚಿತ್ರ ಕಥನ ಕಾವ್ಯ “ಕ.ಕ.ಕೂ.” ಕೃತಿಯನ್ನು ಸುಳ್ಯದ ಸಾಹಿತಿ ಎ.ಕೆ.ಹಿಮಕರ ಅವರು ಕನ್ನಡಕ್ಕೆ ಅನುವಾದಿಸಿದ್ದು, ಬೆಂಗಳೂರಿನ ನಯನ ಸಭಾಂಗಣದಲ್ಲಿ ಜು .9ರಂದು ಇದರ ಲೋಕಾರ್ಪಣೆ ಮಾಡಲಾಯಿತು.


ಬೆಂಗಳೂರಿನ ಖ್ಯಾತ ರಂಗ ನಿರ್ದೇಶಕ ಶ್ರೀನಿವಾಸ್, ಜಿ. ಕಪ್ಪಣ್ಣ, ರಂಗಾಯಣದ ಮಾಜಿ ನಿರ್ದೇಶಕ ಸಿ.ಬಸವಲಿಂಗಯ್ಯ, ಸಾಹಿತಿ ಡಾ.ಬೈರಮಂಗಲ ರಾಮೇಗೌಡ, ಅನುವಾದಕ ಎ.ಕೆ.ಹಿಮಕರ, ಡಾ.ಶ್ವೇತಾ ಮಡಪ್ಪಾಡಿ, ಕಿಶೋರ್ ಜೋಸೆಫ್, ಸಾಹಿತಿ ಮಹಾಮನಿ, ಸಂಗೀತಗಾರರಾದಿ ರಿತೋ ಪ್ರಿಯೇ, ಜಯನಂದ್, ಜಂಬೆ ಬಾಲೂ, ಚಾಗುಳೆ ಮೊದಲಾದವರು ವೇದಿಕೆಯಲ್ಲಿದ್ದು ಅಭಿಪ್ರಾಯ ವ್ಯಕ್ತಪಡಿಸಿದರು.