ಸುಳ್ಯ ತಾಲೂಕು ಪಂಚಾಯತ್ ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭೇಟಿ

0

ವಿವಿಧ ಯೋಜನೆಯಗಳ ಕಾಮಗಾರಿ ಪರಿಶೀಲನೆ

ಸುಳ್ಯ ತಾಲೂಕು ಪಂಚಾಯತ್‌ಗೆ ದ.ಕ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆನಂದ್ ಕೆ ಇಂದು ಭೇಟಿ ನೀಡಿದರು.

ಬಳಿಕ ಅರಂತೋಡು ಗ್ರಾಮ ಪಂಚಾಯತ್‌ ಎಸ್.ಡಬ್ಲ್ಯು.ಎಂ. ಘಟಕ, ಅಮೃತ ಮುಕ್ತಿಧಾಮ, ಅಮೃತ ಉದ್ಯಾನವನ ಜೆಜೆಎಂ ಕಾಮಗಾರಿ, ಅರಂತೋಡು ಗ್ರಾಮ ಪಂಚಾಯತ್‌ ಗ್ರಂಥಾಲಯ, ಅಂಗನವಾಡಿ ಹಾಗೂ ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಅರಂಬೂರು ಇಲ್ಲಿಗೆ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಪಂಚಾಯತ್‌ನ ಕಾರ್ಯನಿರ್ವಾಹಕ ಅಧಿಕಾರಿ ಭವಾನಿ ಶಂಕರ ಎನ್, ಸುಂದರಯ್ಯ ( ಸಹಾಯಕ ಕಾರ್ಯಪಾಲಕ ಅಭಿಯಂತರರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಸುಳ್ಯ), ಸಹಾಯಕ ನಿರ್ದೇಶಕರಾದ ( ಗ್ರಾ.ಉ) ಶ್ರೀಮತಿ ಸರೋಜಿನಿ ಬಿ ತಾ.ಪಂ ಸುಳ್ಯ, ಹರೀಶ್ ಕಚೇರಿ ವ್ಯವಸ್ಥಾಪಕರು ತಾ.ಪಂ ಸುಳ್ಯ, ಮಣಿಕಂಠನ್ ಸಹಾಯಕ ಅಭಿಯಂತರರು ಪಂ.ರಾ.ಇಂ.ಉಪ ವಿಭಾಗ ಸುಳ್ಯ , ತಾಲೂಕು ಮಟ್ಟದ ಅಧಿಕಾರಿ, ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

ಕಾಮಗಾರಿ ಪರಿಶೀಲನೆ ಸಂದರ್ಭ ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.