ಉಬರಡ್ಕ: ಹಲಸಿನ ಮರದಿಂದ ಬಿದ್ದು ಗಾಯ

0

ಉಬರಡ್ಕ ಮಿತ್ತೂರು ಗ್ರಾಮದ ಬರ್ಜೆರಿಗುಂಡಿ ನಾರಾಯಣ ನಾಯ್ಕ ರವರ ಪುತ್ರ ಕುಮಾರಪ್ರಸಾದ್ ಎಂಬವರು ಹಲಸಿನ ಮರಕ್ಕೆ ಹತ್ತಿ ಹಲಸು ಕೀಳುತ್ತಿದ್ದ ಸಂದರ್ಭ ಏಣಿ ಜಾರಿ ಕೆಳಗೆ ಬಿದ್ದರೆನ್ನಲಾಗಿದೆ.

ಬಿದ್ದ ರಭಸಕ್ಕೆ ತಲೆಗೆ ಗಾಯವಾಗಿದ್ದು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿದು ಬಂದಿದೆ.