ಅಡ್ಪಂಗಾಯ ಅಯ್ಯಪ್ಪ ಮಂದಿರದಲ್ಲಿ ಸಂಕ್ರಮಣ ಪೂಜೆ ಹಾಗೂ ದುರ್ಗಾಪೂಜೆ

0

ವರ್ಗಾವಣೆಗೊಂಡ ಗ್ರಾಮ ಲೆಕ್ಕಿಗ ಶರತ್ ರವರಿಗೆ ಅಭಿನಂದನಾ ಕಾರ್ಯಕ್ರಮ

ಅಡ್ಪಂಗಾಯ ಅಯ್ಯಪ್ಪ ಮಂದಿರದಲ್ಲಿ ಸಂಕ್ರಮಣ ಪೂಜೆ ಹಾಗೂ ದುರ್ಗಾಪೂಜೆ ಮತ್ತು ವರ್ಗಾವಣೆಗೊಂಡ ಅಜ್ಜಾವರ ಗ್ರಾಮ ಲೆಕ್ಕಿಗ ಶರತ್ ರವರಿಗೆ ಸನ್ಮಾನ ಕಾರ್ಯಕ್ರಮವು ಜು.19 ರಂದು ನಡೆಯಿತು.


ಗಣಪತಿ ಹವನದೊಂದಿಗೆ ಪ್ರಾರಂಭಗೊಂಡ ಈ ಕಾರ್ಯಕ್ರಮವು ಅಯ್ಯಪ್ಪ ವ್ರತಧಾರಿಗಳಿಂದ ದೀಪಾರಾಧನೆಯೊಂದಿಗೆ ಸಾಗಿತು. ನಂತರ ಭಜನಾ ಕಾರ್ಯಕ್ರಮವನ್ನು ಕನಕಮಜಲು ಭಜನಾ ಸಂಘದವರು ನಡೆಸಿಕೊಟ್ಟರು.


ರಾತ್ರಿ ಶ್ರೀ ಸನ್ನಿಧಿಯಲ್ಲಿ ಹರಕೆಯ ದುರ್ಗಾಪೂಜೆ ನಡೆಯಿತು. ನಂತರ ಶ್ರೀ ಅಯ್ಯಪ್ಪ ದೇವರಿಗೆ ಮಹಾಪೂಜೆ ನಡೆಯಿತು.
ಗ್ರಾಮದಲ್ಲಿ ಸತತ 8 ವರ್ಷಗಳಿಂದ ಗ್ರಾಮ ಲೆಕ್ಕಿಗನಾಗಿ ಕರ್ತವ್ಯ ನಿರ್ವಹಿಸಿ, ವರ್ಗಾವಣೆಗೊಂಡಿರುವ ಶರತ್ ಅವರನ್ನು, ಅಡ್ಪಂಗಾಯ ಅಯ್ಯಪ್ಪ ಮಂದಿರದ ಧರ್ಮದರ್ಶಿಗಳು ಹಾಗೂ ಗುರುಸ್ವಾಮಿಗಳಾಗಿರುವ ಶಿವಪ್ರಕಾಶ್ ಅಡ್ಪಂಗಾಯರವರು ಫಲ, ಪುಷ್ಪ, ಸ್ಮರಣಿಕೆಗಳೊಂದಿಗೆ ಶಾಲು ಹೊದಿಸಿ ಅಭಿನಂದಿಸಿದರು.
ನಂತರ ಪ್ರಸಾದ ವಿತರಣೆ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.