ಶಾಂತಿನಗರದಲ್ಲಿ ಯೋಗ ತರಬೇತಿ ಕಾರ್ಯಾಗಾರದ ಉದ್ಘಾಟನೆ

0

ರಾಷ್ಟ್ರೀಯ ಆರೋಗ್ಯ ಅಭಿಯಾನ ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಆಯುಷ್ಮಾನ್ ಭಾರತ್-ಆರೋಗ್ಯ
ಕರ್ನಾಟಕ,ಆರೋಗ್ಯ ಮತ್ತು ಕ್ಷೇಮ ಕೇಂದ್ರ ಸುಳ್ಯ , ದೀಪಾಂಜಲಿ ಮಹಿಳಾ ಮಂಡಲ ಶಾಂತಿನಗರ ಇದರ ಜಂಟಿ ಆಶ್ರಯದಲ್ಲಿ ಜು. 21 ರಂದು ಶಾಂತಿನಗರದಲ್ಲಿ (ಸ್ಟೇಡಿಯಂ ಹತ್ತಿರ) ಯೋಗ ತರಬೇತಿ ಕಾರ್ಯಾಗಾರವನ್ನು
ಯೋಗ ತರಬೇತುದಾರ ಸಂತೋಷ್ ಮುಂಡಕಜೆ ದೀಪ ಬೆಳಗಿಸಿ ಉದ್ಘಾಟಿಸಿದರು.


ಈ ಸಂದರ್ಭದಲ್ಲಿ
ಸುಳ್ಯ ಸಮುದಾಯ ಆರೋಗ್ಯ ಅಧಿಕಾರಿ ತೇಜಶ್ರೀ,ದೀಪಾಂಜಲಿ ಮಹಿಳಾ ಮಂಡಲದ ಸ್ಥಾಪಕಾಧ್ಯಕ್ಷೆ ಹರ್ಷ ಕರುಣಾಕರ ಸೇರ್ಕಜೆ, ಅಧ್ಯಕ್ಷೆ ಲಲಿತಾ. ಯಂ, ಇಂದಿರಾ ಮಂಚಿ,ಬಿಂದು ಚಂದ್ರನ್,ಶೋಭಾ ಗೋಪಾಲ್ ಉಪಸ್ಥಿತರಿದ್ದರು.

ಮಹಿಳಾ ಮಂಡಲದ
ಸದಸ್ಯರು ಹಾಗೂ ಮಕ್ಕಳು ಭಾಗವಹಿಸಿದರು.
ಪ್ರತಿ ಶುಕ್ರವಾರದಂದು ಯೋಗ ತರಬೇತಿ ನಡೆಯಲಿರುವುದಾಗಿ ಸಂಘಟಕರು ತಿಳಿಸಿದರು.