ಅಪಾಯವನ್ನು ಆಹ್ವಾನಿಸುತ್ತಿರುವ ಸುಳ್ಯ ಕೆಎಸ್‌ಆರ್ಟಿಸಿ ಬಸ್ಸು ನಿಲ್ದಾಣದ ತಡೆಗೋಡೆ

0


ಸುಳ್ಯ ಕೆಎಸ್‌ಆರ್ಟಿಸಿ ಬಸ್ಸು ನಿಲ್ದಾಣದ ತಡೆಗೋಡೆಯ ಒಂದು ಭಾಗ ಬಿರುಕು ಬಿಟ್ಟಿದ್ದು, ಅದು ಅಪಾಯವನ್ನು ಆಹ್ವಾನಿಸುವಂತಿದೆ.
ರಸ್ತೆಯ ಕಡೆಗೆ ಅಲ್ಪ ವಾಲಿಕೊಂಡು ನಿಂತಿದೆ. ಈ ರಸ್ತೆ ನಾವೂರು ಭಾಗಕ್ಕೆ ಸಂಪರ್ಕಿಸುವ ರಸ್ತೆಯಾಗಿದ್ದು ನೂರಾರು ವಿದ್ಯಾರ್ಥಿಗಳು, ಮತ್ತು ಈ ಭಾಗದ ಸಾರ್ವಜನಿಕರು ಸುಳ್ಯ ಪೇಟೆಗೆ ಮತ್ತು ಶಾಲೆಗಳಿಗೆ ಬರಲು ಹೆಚ್ಚಾಗಿ ಈ ರಸ್ತೆಯನ್ನು ಬಳಸುತ್ತಾರೆ.


ಇದೀಗ ಎರಡು ದಿನದಿಂದ ಮಳೆಯ ಪ್ರಮಾಣವೂ ಹೆಚ್ಚಾಗಿದ್ದು ಅಪಾಯಕ್ಕೆ ಕಾರಣವಾಗಿದೆ. . ಸಂಬಂಧಪಟ್ಟವರು ಕೂಡಲೆ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.