ಬಂಟಸಿರಿ ವಿವಿಧೋದ್ದೇಶ ಸಹಕಾರಿ ಸಂಘದ ನಿಂತಿಕಲ್ಲು ಶಾಖೆಗೆ ಸಲಹಾ ಸಮಿತಿ ರಚನೆ ಸಂಚಾಲಕರಾಗಿ ಲೋಕನಾಥ ರೈ

0

ಪುತ್ತೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಬಂಟಸಿರಿ ವಿವಿಧೋದ್ದೇಶ ಸಹಕಾರಿ ಸಂಘದ ನಿಂತಿಕಲ್ಲು ಶಾಖೆಗೆ ಸಲಹಾ ಸಮಿತಿಯನ್ನು ಜು. 20ರಂದು ರಚಿಸಲಾಯಿತು.

ಸಮಿತಿ ಸಂಚಾಲಕರಾಗಿ ಲೋಕನಾಥ ರೈ ಎಣ್ಮೂರು ಆಯ್ಕೆಯಾದರು. ಸಲಹಾ ಸಮಿತಿ ಸದಸ್ಯರಾಗಿ ಪ್ರಭಾಕರ ರೈ ಎಣ್ಮೂರು, ವಾಸಪ್ಪ ರೈ ನೂಜಾಡಿ, ಪದ್ಮನಾಭ ರೈ ಎಂಜಿರ, ರಮಾನಂದ ರೈ, ಯತೀಂದ್ರನಾಥ ರೈ, ಚಂದ್ರಹಾಸ ರೈ ಅಗಲ್ಪಾಡಿ, ಕುಸುಮಾವತಿ ಜಿ. ರೈ, ರೂಪರಾಜ್ ರೈ, ಸುಭಾಶ್ಚಂದ್ರ ರೈ ತೋಟ, ದಿವಾಕರ ರೈ, ವೇದವ್ಯಾಸ ರೈ, ರವೀಂದ್ರ ರೈ ಅಡ್ಡಬೈಲು ಮತ್ತು ಕೇಶವ ರೈ ಆಯ್ಕೆಯಾದರು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಜಗನ್ನಾಥ ರೈ ಮಾದೋಡಿ ವಹಿಸಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ರೈ ನಡುವೈಲು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳು ಸಹಕರಿಸಿದರು.